ದರೋಡೆಕೋರರನ್ನು ಕುರ್ಚಿ, ಚಪ್ಪಲಿಯಿಂದ ಹೊಡೆದೋಡಿಸಿದ್ದ “ದಂಪತಿ”ಗೆ ಶೌರ್ಯ ಪ್ರಶಸ್ತಿ
Team Udayavani, Aug 16, 2019, 11:44 AM IST
ಚೆನ್ನೈ: ಲಾಂಗ್(ಮಚ್ಚು) ಹಿಡಿದು ಬಂದಿದ್ದ ಇಬ್ಬರು ದರೋಡೆಕೋರರನ್ನು ದಂಪತಿ ಪ್ಲಾಸ್ಟಿಕ್ ಕುರ್ಚಿ, ಚಪ್ಪಲಿ ಎಸೆದು ಓಡಿಸಿರುವ ವೀಡಿಯೋ ತುಣುಕು ಇತ್ತೀಚೆಗೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡಿತ್ತು. ಏತನ್ಮಧ್ಯೆ ಧೈರ್ಯದಿಂದ ದರೋಡೆಕೋರರನ್ನು ಹೊಡೆದೋಡಿಸಿದ್ದ ದಂಪತಿಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿಶೇಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಿ.ಷಣ್ಮುಗವೇಲು ಮತ್ತು ಅವರ ಪತ್ನಿ ಸೆಂಥಾಮರೈಗೆ ಮುಖ್ಯಮಂತ್ರಿ ಪಳನಿಸ್ವಾಮಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕದೊಂದಿಗೆ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.
ಷಣ್ಮುಗವೇಲು ಅವರು ಮನೆಯ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದಾಗ…ಹಿಂದಿನಿಂದ ಬಂದ ದರೋಡೆಕೋರನೊಬ್ಬ ಅವರ ಕುತ್ತಿಗೆಗೆ ಶಾಲು ಸುತ್ತಿ ಕೊಲ್ಲಲು ಯತ್ನಿಸಿದ್ದ. ಈ ವೇಳ ಷಣ್ಮುಗವೇಲು ಕುರ್ಚಿಯಿಂದ ಕೆಳಗೆ ಬಿದ್ದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಏತನ್ಮಧ್ಯೆ ಮತ್ತೊಬ್ಬ ದರೋಡೆಕೋರ ಸಾಥ್ ನೀಡಿದ್ದ..ಅಷ್ಟರಲ್ಲಿ ಮನೆಯೊಳಗಿಂದ ಬಂದ ಪತ್ನಿ ಸೆಂಥಾಮರೈ ಕೂಡಲೇ ಇಬ್ಬರು ದರೋಡೆಕೋರರ ಮೇಲೆ ಕುರ್ಚಿ, ಚಪ್ಪಲಿ ಎಸೆದಿದ್ದರು. ಷಣ್ಮುಗವೇಲು ಕೂಡಾ ತಪ್ಪಿಸಿಕೊಂಡು ಪ್ಲಾಸ್ಟಿಕ್ ಕುರ್ಚಿಯಿಂದ ದರೋಡೆಕೋರರನ್ನು ಥಳಿಸಿದ್ದರು. ಕೊನೆಗೂ ಇಬ್ಬರು ಪರಾರಿಯಾಗಿದ್ದರು. ಈ ಎಲ್ಲಾ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್