ಚಂಡಮಾರುತಕ್ಕೆ ಸಿಕ್ಕ ಚುನಾವಣ ಪ್ರಚಾರ
Team Udayavani, May 4, 2019, 6:00 AM IST
ಚಂಡಮಾರುತ ಶುಕ್ರವಾರ ಬೆಳಗ್ಗೆ ಪುರಿಗೆ ಅಪ್ಪಳಿಸಿದ ರಭಸಕ್ಕೆ ರಸ್ತೆಗೆ ಉರುಳಿದ ಮರಗಳು.
ಚುನಾವಣೆಯ ಹೊಸ್ತಿಲಲ್ಲೇ ಚಂಡಮಾರುತ ಫೋನಿ ಅಪ್ಪಳಿಸಿರುವುದರಿಂದ ಇಡೀ ಚುನಾವಣೆ ಪ್ರಚಾರ ಹಾಗೂ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಹುತೇಕ ಸ್ಥಗಿತಗೊಂಡಿದೆ. ಜನರು ಸಂಕಷ್ಟದಲ್ಲಿರುವಾಗ ಚುನಾವಣ ಪ್ರಚಾರ ಮಾಡುವ ಸಾಹಸಕ್ಕೆ ರಾಜಕಾರಣಿಗಳೂ ಕೈಹಾಕುತ್ತಿಲ್ಲ. ಈಗಾಗಲೇ ಒಡಿಶಾದ ಎರಡು ಸ್ಟಾಂಗ್ ರೂಮ್ ಅನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವ ಇನ್ನೂ ಕೆಲವು ದಿನಗಳವರೆಗೆ ಚುನಾವಣೆಯ ಮೇಲೆ ಪ್ರಭಾವ ಬೀರುವುದಂತೂ ಖಚಿತ.
ಬಿರುಗಾಳಿಯಿಂದ ಕೂಡಿದ ಮಳೆಯು, ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿದೆ. ಇದೇ ತಿಂಗಳ 6ರಂದು ಜಾರ್ಖಂಡ್ನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಒಡಿಶಾದ ಅಕ್ಕಪಕ್ಕದ ಜಾರ್ಖಂಡ್ಗೆ ಸೇರಿದ ಕೆಲವು ಪ್ರಾಂತ್ಯಗಳಲ್ಲಿ ರ್ಯಾಲಿ ನಡೆಯಬೇಕಿತ್ತು. ಒಡೆರ್ಮಾ, ಕುಂತಿ ಮತ್ತು ರಾಂಚಿಯಲ್ಲಿ ಅಮಿತ ಶಾ ರ್ಯಾಲಿ ನಡೆಸಬೇಕಿತ್ತು. ತಾಮ್ಲುಕ್ ಹಾಗೂ ಜಾರ್ಗ್ರಾಮ್ನಲ್ಲಿ ಮೋದಿ ರ್ಯಾಲಿ ನಡೆಸಬೇಕಿತ್ತು. ಆದರೆ, ಚಂಡಮಾರುತದಿಂದಾಗಿ ಆ ರ್ಯಾಲಿಗಳನ್ನು ರದ್ದುಗೊಳಿಸಲಾಗಿದೆ. ಅತ್ತ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಬೇಕಿದ್ದ ಹಲವು ರ್ಯಾಲಿಗಳನ್ನೂ ರದ್ದುಗೊಳಿಸಲಾಗಿದೆ. ಶನಿವಾರದವರೆಗಿನ ಎಲ್ಲ ರ್ಯಾಲಿಗಳನ್ನು ರದ್ದುಗೊಳಿಸಲಾಗಿದೆ. ಕೋಲ್ಕತಾ ಹಾಗೂ ಭುವನೇಶ್ವರ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದರಿಂದ ಗಣ್ಯರ ಹಾರಾಟಕ್ಕೂ ಅಡಚಣೆ ಉಂಟಾಗಿದೆ.
ಸುಭದ್ರ ಸ್ಥಳಕ್ಕೆ ಇವಿಎಂಗಳ ರವಾನೆ: ಇತ್ತೀಚೆಗೆ ಒಡಿಶಾ ವಿಧಾನಸಭೆಗೆ ನಡೆದಿದ್ದ ಚುನಾವಣೆ ವೇಳೆ ಮತಯಂತ್ರಗಳನ್ನು (ಇವಿಎಂ) ಸಂಗ್ರಹಿಸಿಡಲಾಗಿದ್ದ ಎರಡು ‘ಸ್ಟ್ರಾಂಗ್ ರೂಮ್’ ಅನ್ನುಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾದ ಚುನಾವಣಾ ಆಯುಕ್ತ ಸುರೇಂದ್ರ ಕುಮಾರ್ ತಿಳಿಸಿದ್ದಾರೆ. ಎರಾಸಮ-ಬಾಲಿಕುಡ ಹಾಗೂ ಜಗತ್ಸಿಂಗ್ಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಜಗತ್ಸಿಂಗ್ಪುರದಲ್ಲಿರುವ ಎಸ್ವಿಎಂ ಕಾಲೇಜಿನ ನೆಲ ಅಂತಸ್ತಿನಲ್ಲಿ ಇಡಲಾ ಗಿತ್ತು. ಆದರೆ, ಚಂಡಮಾರುತದ ಭೀತಿಯಿಂದಾಗಿ ಅವುಗಳನ್ನು ಅದೇ ಕಾಲೇಜಿನ ಮೊದಲ ಅಂತಸ್ತಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ, ಮೋಹನಾ ಮತ್ತು ಪಾರಲಖೇ ಮುಂಡಿ ಎಂಬೆರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಮುಂಜಾಗ್ರತೆ ಕ್ರಮವಾಗಿ ಗಜಪತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಬಳಿಯಿರುವ ಇವಿಎಂ ಗೋಡೌನ್ಗೆ ಸ್ಥಳಾಂತರಿಸಲಾಗುತ್ತದೆ ಎಂದು ಸುರೇಂದ್ರ ಕುಮಾರ್ತಿಳಿಸಿದ್ದಾರೆ.
ವೈಮಾನಿಕ ಸಂಚಾರ ಅಸ್ತವ್ಯಸ್ತ: ಫೋನಿ ಚಂಡಮಾರುತ ಬಾಧೆಗೆ ಸಿಲುಕಿರುವ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲದಲ್ಲಿ ಸಾರಿಗೆ ಸಂಚಾರ ವ್ಯತ್ಯಯವಾಗಿದೆ. ಗೋಏರ್ ಶುಕ್ರವಾರದ ಕೋಲ್ಕತಾ-ಭುವನೇಶ್ವರ ಮತ್ತು ಮುಂಬೈ-ಭುವನೇಶ್ವರ ವಿಮಾನಗಳನ್ನು ರದ್ದುಗೊಳಿಸಿದೆ. ಈ ವಿಮಾನಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು, ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಪ್ರಯಾಣಿಕರಿಗೆ ಸೂಚನೆ ನೀಡಿರುವ ಇಂಡಿಗೋ, ಭುವನೇಶ್ವರ, ಕೋಲ್ಕತಾ, ವಿಶಾಖಪಟ್ಟಣಂ ಕಡೆ ಹೋಗಬೇಕಿದ್ದ ಪ್ರಯಾಣಿಕರು ತಮ್ಮ ಟಿಕೆಟ್ ರದ್ದು ಮಾಡಿದರೆ, ರದ್ದತಿ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಏರ್ ಇಂಡಿಯಾ, ವಿಸ್ತಾರ ಸಂಸ್ಥೆಗಳೂ ಕೂಡ ಇದೇ ಹಾದಿ ಹಿಡಿದಿವೆ. ಇನ್ನು, ಕೋಲ್ಕತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶುಕ್ರವಾರ ಸಂಜೆ ರಾತ್ರಿ 9:30ರಿಂದ ಶನಿವಾರ ಸಂಜೆ 6 ವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ.
ಇಂದು ನೇಪಾಲ, ಬಾಂಗ್ಲಾಕ್ಕೆ ಲಗ್ಗೆ
ಶುಕ್ರವಾರ ಸಂಜೆಯ ನಂತರ ಫೋನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಸಂಜೆಯ ನಂತರ ಅದು ಈಶಾನ್ಯ ರಾಜ್ಯಗಳತ್ತ ಹೊರಳಿದೆ. ಶನಿವಾರ ಬಾಂಗ್ಲಾದೇಶವನ್ನು ಪ್ರವೇಶಿಸಲಿದ್ದು, ನೇಪಾಲದ ಕೆಲ ಭಾಗಗಳನ್ನೂ ಸ್ಪರ್ಶಿಸಲಿದೆ. ಬಾಂಗ್ಲಾದೇಶದ ಗಡಿ ಪ್ರವೇಶಿಸುವಷ್ಟರಲ್ಲಿ ಚಂಡಮಾರುತದ ತೀವ್ರತೆ ಪ್ರತಿ ಗಂಟೆಗೆ 70ರಿಂದ 80 ಕಿ.ಮೀ.ಗಳಷ್ಟಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತವು ಬಾಂಗ್ಲಾದ ಸುಮಾರು 100 ಸ್ಥಳಗಳಿಗೆ ಬಾಧಿಸಲಿದೆ. ಅತ್ತ, ನೇಪಾಲದ ಹವಾಮಾನ ಇಲಾಖೆಯೂ ಪೋನಿ ಆಗಮನಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಹವಾಮಾನ ತಜ್ಞರು, ಪೋನಿ ಚಂಡಮಾರುತವು ನೇಪಾಲದ ಹವಾಮಾನದಲ್ಲಿ ಬದಲಾವಣೆ ಉಂಟು ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ