ಷೇರು ಪೇಟೆಗೆ ಚೈತನ್ಯ ತಾರದ ಚುನಾವಣಾ ಫಲಿತಾಂಶ
Team Udayavani, May 16, 2018, 6:05 AM IST
ಮುಂಬೈ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ ಎಂಬ ನಿರೀಕ್ಷೆ
ಹುಸಿಯಾಗುತ್ತಿದ್ದಂತೆಯೇ ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಕುಸಿಯಿತು. ಇದರ ಜತೆಗೆ ಚೀನಾ ಪ್ರಕಟಿಸಿದ ಆರ್ಥಿಕ ವರದಿಯೂ ಕೂಡ ಸೂಚ್ಯಂಕ ಪತನವಾಗಲು ಕಾರಣವಾಯಿತು.
ಷೇರು ಪೇಟೆ ದಿನದ ವಹಿವಾಟು ಆರಂಭಿಸುತ್ತಲೇ ಸೂಚ್ಯಂಕ 436 ಅಂಕಗಳಷ್ಟು ನೆಗೆಯಿತು. ನಿμr ಸೂಚ್ಯಂಕ ಕೂಡ 128 ಅಂಕಗಳಷ್ಟು ಏರಿಕೆ ಕಂಡಿತ್ತು. ಹೂಡಿಕೆದಾರರೂ ಕೂಡ ಕರ್ನಾಟಕದಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸದಿಂದ ಇದ್ದರು. ಈ ಸಂದರ್ಭದಲ್ಲಿ ಬಿಎಸ್ಇ ಸೂಚ್ಯಂಕ 35,993.53ಕ್ಕೆ ಏರಿಕೆಯಾಯಿತು. ನಿಫ್ಟಿ ಕೂಡ 10,900 ಅಂಕಗಳನ್ನು ದಾಟಿತು.
ಒಂದೊಂದೇ ಕ್ಷೇತ್ರದ ಫಲಿತಾಂಶ ಪ್ರಕಟವಾಗಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷ ಎಂದು
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಬಿಎಸ್ಇ ಸೂಚ್ಯಂಕ 12.77 ಪಾಯಿಂಟ್ಗಳಷ್ಟು ಕುಸಿಯಿತು. ಅಂತಿಮವಾಗಿ
ಮಂಗಳವಾರದ ದಿನದ ಅಂತ್ಯಕ್ಕೆ ಸೂಚ್ಯಂಕ 35,543.94ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ
10,929.20ರಲ್ಲಿ ಮುಕ್ತಾಯವಾಗಿ 4.75 ಅಂಕಗಳಷ್ಟು ಕುಸಿತ ಕಂಡಿತು. ಇದರ ಜತೆಗೆ ಅಮೆರಿಕದ ಡಾಲರ್ ರುಪಾಯಿ ಕೂಡ ಮಧ್ಯಂತರದಲ್ಲಿ 52 ಪೈಸೆಯಷ್ಟು ಇಳಿಕೆ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ