ಪತ್ತೆಯಾದಳು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ‘ಲಕ್ಷ್ಮಿ’ ; ಆನೆ ಕದ್ದವರಾರು!?


Team Udayavani, Sep 19, 2019, 7:15 AM IST

Lakshmi-Elephant

ನವದೆಹಲಿ: ‘ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ’ ಎಂಬ ನಾಣ್ಣುಡಿ ನಮ್ಮಲ್ಲಿ ಜನಪ್ರಿಯವಾಗಿದೆ. ಆದರೆ ಅಡಿಕೆ ಕದ್ದಷ್ಟು ಸುಲಭವಾಗಿ ಆನೆ ಕದಿಯಲು ಸಾಧ್ಯವಿಲ್ಲ ಬಿಡಿ! ವೀರಪ್ಪನ್ ತರಹದವರಾದರೆ ಕಡೇಪಕ್ಷ ಆನೆದಂತವನ್ನಷ್ಟೇ ಕದಿಯಬಹುದು. ಆದರೆ ಇಲ್ಲಿ ವಿಷಯ ಅದಲ್ಲ, ಕಳೆದ ಎರಡು ತಿಂಗಳಿಂದ ದೆಹಲಿ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದ್ದ ‘ಆನೆ ನಾಪತ್ತೆ’ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. 47 ವರ್ಷ ಪ್ರಾಯದ ಲಕ್ಷ್ಮಿ ಎಂಬ ಆನೆ ಕೊನೆಗೂ ಬುಧವಾರ ಪತ್ತೆಯಾಗಿದ್ದಾಳೆ.

ಹಾಗಾದರೆ ಏನಿದು ‘ಗಜ ಮಿಸ್ಸಿಂಗ್’ ಕಥೆ?
ರಾಷ್ಟ್ರರಾಜಧಾನಿಯ ಶಾಖಾರ್ ಪುರ್ ಪ್ರದೇಶದಿಂದ ಕಳೆದ ಜುಲೈ 06ರಂದು ಲಕ್ಷ್ಮಿ ಹೆಸರಿನ ಈ ಆನೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದಳು. ಈ ಆನೆಯ ಮಾಲಿಕರಾಗಿದ್ದ ಯೂಸುಫ್ ಆಲಿ ಎಂಬಾತ ಲಕ್ಷ್ಮಿಯನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತಿರಲಿಲ್ಲ. ಈ ಆನೆಯನ್ನು ಕಟ್ಟಿಹಾಕಲು ಸೂಕ್ತ ವಸತಿ ವ್ಯವಸ್ಥೆಯನ್ನು ಮಾಡಿರಲಿಲ್ಲ ಹಾಗೆಯೇ ಈ ಆನೆಯ ದಿನನಿತ್ಯದ ಪಾಲನೆಯನ್ನೂ ಸಹ ಲಕ್ಷ್ಮಿಯ ಮಾಲಿಕರು ಸರಿಯಾಗಿ ಮಾಡುತ್ತಿರಲಿಲ್ಲ.

ಇನ್ನು ಅಧ್ಯಯನ ಸಮಿತಿಯ ವರದಿ ಒಂದನ್ನು ಆಧರಿಸಿ 2017ರಲ್ಲಿ ದೆಹಲಿ ಹೈಕೋರ್ಟ್ ತಾನು ನೀಡಿದ್ದ ಆದೇಶ ಒಂದರಲ್ಲಿ ದೆಹಲಿ ನಗರದಲ್ಲಿರುವ ಎಲ್ಲಾ ಆನೆಗಳನ್ನು ನಗರದ ಹೊರಭಾಗಕ್ಕೆ ಸಾಗಿಸಬೇಕು ಎಂದು ಸ್ಪಷ್ಟ ನಿರ್ದೇಶನವನ್ನು ಅರಣ್ಯ ಇಲಾಖೆಗೆ ನೀಡಿತ್ತು.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಲಕ್ಷ್ಮಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಫೆಬ್ರವರಿ ತಿಂಗಳಿನಲ್ಲಿ ಯೂಸುಫ್ ಆಲಿ ಅವರಿಗೆ ನೊಟೀಸ್ ಒಂದನ್ನೂ ಸಹ ನೀಡಿದ್ದರು. ಆದರೆ ಈ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲನ್ನು ಹತ್ತಿದ ಯೂಸುಫ್ ಆಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಲಕ್ಷ್ಮಿಯನ್ನು ಹೊಸ ಜಾಗಕ್ಕೆ ಕರೆದುಕೊಂಡು ಹೋಗಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವವರೆಗೆ ಆಕೆಯನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯದಿಂದ ಆದೇಶವೊಂದನ್ನು ತರುತ್ತಾರೆ.

ನ್ಯಾಯಾಲಯದ ಆದೇಶದಂತೆ ಕಾರ್ಯೋನ್ಮುಖರಾದ ದೆಹಲಿ ಅರಣ್ಯಾಧಿಕಾರಿಗಳು ಹರ್ಯಾಣದಲ್ಲಿರುವ ಬನ್ ಸಂತೂರ್ ಆನೆ ಪುನರ್ವಸತಿ ಕೇಂದ್ರದಲ್ಲಿ ಲಕ್ಷ್ಮಿಯನ್ನು ಇರಿಸಿಕೊಳ್ಳಲು ಒಪ್ಪಿಗೆಯನ್ನು ಪಡೆದುಕೊಂಡು ಬಳಿಕ ಲಕ್ಷ್ಮಿಯನ್ನು ಅಲ್ಲಿಗೆ ಸಾಗಿಸಲು ಅಗತ್ಯವಿದ್ದ ಒಪ್ಪಿಗೆ ಪತ್ರವನ್ನು ರಾಜ್ಯದ ಮುಖ್ಯ ವನ್ಯಜೀವಿ ಪಾಲಕರಿಂದ ಜುಲೈ 1ನೇ ತಾರೀಖಿನಂದು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಹೀಗೆ ನ್ಯಾಯಾಲಯದ ನಿರ್ದೇಶನದಂತೆ ಲಕ್ಷ್ಮಿಯನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವ ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಿದ ದೆಹಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜುಲೈ 6ರಂದು ಲಕ್ಷ್ಮಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಅಲ್ಲಿಗೆ ಹೋದ ಸಂದರ್ಭದಲ್ಲಿ ಆನೆಯ ಮಾಲಿಕ ಅಲಿ, ಆತನ ಮಗ ಮತ್ತು ಇತರರು ಸೇರಿ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಾರೆ ಮತ್ತು ಆನೆಯ ಮಾವುತ ಆನೆಯೊಂದಿಗೆ ಅಕ್ಷರಧಾಮ ಅರಣ್ಯದ ಬಳಿ ನಾಪತ್ತೆಯಾಗುತ್ತಾನೆ. ಹೀಗೆ ಶುರುವಾಗುತ್ತದೆ ಲಕ್ಷ್ಮಿಯ ಮಿಸ್ಸಿಂಗ್ ಕಥೆ.

ಈ ಘಟನೆಯ ಬಳಿಕ ಅಲರ್ಟ್ ಆದ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ರಾಜ್ಯಗಳ ಮುಖ್ಯ ವನ್ಯಜೀವಿ ಪಾಲಕರಿಗೆ ಪತ್ರವೊಂದನ್ನು ಬರೆಯುತ್ತಾರೆ ಮತ್ತು ಅದರಲ್ಲಿ ಲಕ್ಷ್ಮಿಯ ಕುರಿತಾಗಿ ಮಾಹಿತಿ ದೊರೆತಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿಕೊಳ್ಳುತ್ತಾರೆ. ಇನ್ನು ಆನೆಯನ್ನು ನೇಪಾಳಕ್ಕೆ ಸಾಗಿಸಿರಬಹುದು ಎಂಬ ಶಂಕೆಯಲ್ಲಿ ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗಕ್ಕೂ ಅರಣ್ಯಾಧಿಕಾರಿಗಳು ಪತ್ರ ಬರೆದು ಮಾಹಿತಿ ನೀಡುತ್ತಾರೆ.

ಆದರೆ ಲಕ್ಷ್ಮಿ ದೆಹಲಿ ಸುತ್ತಮುತ್ತಲೇ ಇರುವ ಸುಳಿವು ಅಧಿಕಾರಿಗಳಿಗೆ ಕೆಲವೊಂದು ಮಾಧ್ಯಮ ವರದಿಗಳ ಮೂಲಕ ಸಿಗುತ್ತದೆ. ಈ ಮಾಹಿತಿಯ ಜಾಡನ್ನು ಹಿಡಿದು ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಲಕ್ಷ್ಮಿ ದೆಹಲಿ ಪೊಲೀಸ್ ಕಮಿಷನರ್ (ಉತ್ತರ) ಅವರ ಕಛೇರಿಯಿಂದ 100 ಮೀಟರ್ ದೂರದಲ್ಲಿ ಸುರಕ್ಷಿತವಾಗಿ ಇರಿಸಿರುವುದು ಪತ್ತೆಯಾಗುತ್ತದೆ.

ಈ ಆನೆಯೊಂದಿಗೆ ಆಕೆಯ ಮಾವುತ ಸದ್ದಾಂ ಕೂಡ ಪತ್ತೆಯಾಗುತ್ತಾನೆ. ಇಷ್ಟು ದಿನಗಳವರೆಗೆ ಸದ್ದಾಂ ಲಕ್ಷ್ಮಿಯನ್ನು ಅಧಿಕಾರಿಗಳ ಕಣ್ಣಿಗೆ ಬೀಳದಂತೆ ಇರಿಸಿದ್ದ ಮತ್ತು ಲಕ್ಷ್ಮಿಗೆ ಬೆಳಿಗ್ಗೆ ಮಾತ್ರ ತಿನ್ನಲು ನೀಡುತ್ತಿದ್ದ ಮತ್ತು ನಿತ್ಯ ಸ್ನಾನ ಮಾಡಿಸುತ್ತಿದ್ದ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ದೆಹಲಿ ನಗರ ಪರಿಸರದಲ್ಲಿ ಎಲ್ಲೋ ಲಕ್ಷ್ಮಿ ಇರಬಹುದೆಂಬ ಗುಮಾನಿ ಅಧಿಕಾರಿಗಳಿಗೆ ಬಂದ ಬಳಿಕ ಯಮುನಾ ಪುಸ್ತಾ ಪ್ರದೇಶದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಲಕ್ಷ್ಮಿ ಮತ್ತು ಆಕೆಯ ಮಾವುತ ಬುಧವಾರದಂದು ಪತ್ತೆಯಾದರು ಎಂದು ದೆಹಲಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ಲಕ್ಷ್ಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಅರಣ್ಯ ಅಧಿಕಾರಿಗಳು ಅದಕ್ಕೆ ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕ ಲಕ್ಷ್ಮಿಯನ್ನು ಬನ್ ಸಂತೂರ್ ಆನೆ ಪುನರ್ವಸತಿ ಕೇಂದ್ರಕ್ಕೆ ಶೀಘ್ರವೇ ಕಳುಹಿಸಿಕೊಡುವ ಏರ್ಪಾಡನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಮನುಷ್ಯನ ಸ್ವಾರ್ಥ ಮತ್ತು ಕಿಡಿಗೇಡಿತನಕ್ಕೆ ಮಾತು ಬಾರದ ಮೂಕ ಪ್ರಾಣಿಯೊಂದು ಕೆಲವು ತಿಂಗಳುಗಳ ಕಾಲ ಅರೆಹೊಟ್ಟೆಯಲ್ಲಿ ನರಳಬೇಕಾದ ಪರಿಸ್ಥಿತಿ ಎದುರಾದದ್ದು ಮಾತ್ರ ದುರಂತವೇ ಸರಿ.

ಟಾಪ್ ನ್ಯೂಸ್

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.