ಆನೆಗಳಿಂದ ಗುಡಿಸಲು ಧ್ವಂಸ: ಇಬ್ಬರು ಮಕ್ಕಳ ದಾರುಣ ಸಾವು
Team Udayavani, Jun 21, 2018, 4:54 PM IST
ಧನಬಾದ್, ಜಾರ್ಖಂಡ್ : ಧನಬಾದ್ನ ದೊಮುಂಡಾ ಎಂಬಲ್ಲಿ ಕಾಡಾನೆಗಳ ಗುಂಪೊಂದು ಗುಡಿಸಲನ್ನು ಎಳೆದು ನಾಶಮಾಡಿದ ಘಟನೆಯಲ್ಲಿ ಮನೆಯೊಳಗಿದ್ದ ಇಬ್ಬರು ಮಕ್ಕಳು ಮೃತಪಟ್ಟು ಅವರ ಅಜ್ಜಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಆನೆಗಳು ಆಹಾರ ಅರಸಿಕೊಂಡು ಗುಡಿಸಲು ಇರುವ ಕಡೆಗೆ ಬಂದಿದ್ದವು; ಮನೆಯಲ್ಲಿ ಭತ್ತ ಸಂಗ್ರಹಿಸಿಡಲಾಗಿತ್ತು. ಅದನ್ನು ಎಳೆದು ತಿನ್ನುವ ಅವುಗಳ ದಾಳಿಯಲ್ಲಿ ಇಡಿಯ ಮನೆಯೇ ಧರಾಶಾಯಿಯಾಯಿತು. ನಸುಕಿನ 3 ಗಂಟೆಯ ವೇಳೆಗೆ ಈ ಘಟನೆ ನಡೆದಾಗ ಮನೆಯವರೆಲ್ಲ ನಿದ್ರಿಸಿಕೊಂಡಿದ್ದರು.
ಗುಡಿಸಲಲ್ಲಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಸತ್ತರು ಅವರ ಅಜ್ಜಿ ಗಂಭೀರವಾಗಿ ಗಾಯಗೊಂಡರು ಎಂದು ವಿಭಾಗೀಯ ಅರಣ್ಯಾಧಿಕಾರಿ ಸೌರಭ್ ಚಂದ್ರ ತಿಳಿಸಿದರು.