ಅಂತ್ಯೋದಯ ಆಧಾರಿತ ಆರ್ಥಿಕತೆಗೆ ಒತ್ತು


Team Udayavani, May 15, 2020, 7:46 AM IST

ottu

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಆರ್ಥಿಕತೆಯ ಕನಸಿಗೆ ಪೂರಕವಾಗಿ ಬುಧವಾರ ಮೊದಲ ಹಂತದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ 3 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜನ್ನು ಘೋಷಿಸಿ ದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ನ್‌, ಗುರುವಾರ ರೈತರು, ಬಡವರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಸಬಲೀಕರಣ ಕ್ಕಾಗಿ ಮತ್ತೂಂದು ಸುತ್ತಿನ ಪ್ಯಾಕೇಜ್‌ ಹಾಗೂ ಸೌಲಭ್ಯಗಳನ್ನು  ಘೋಷಿಸಿದ್ದಾರೆ. ಇದೆಲ್ಲರ ಮುಖ್ಯ ಉದ್ದೇಶ – ದೇಶದ ಆರ್ಥಿಕತೆ ಯನ್ನು ಚುರುಕುಗೊಳಿಸುವುದಷ್ಟೇ ಅಲ್ಲದೆ, ಇಡೀ ದೇಶದ ಆರ್ಥಿಕತೆಯನ್ನು ಸ್ವಾವಲಂಬಿಯ ನ್ನಾಗಿಸುವತ್ತ ಹೆಜ್ಜೆ ಇರಿಸಲಾಗಿದೆ.

ಗುರುವಾರ ಪ್ರಕಟಿಸಲಾದ  ಯೋಜನೆಗಳನ್ನುಗಮನಿಸಿದಾಗ, ಬಹುಮುಖ್ಯವಾಗಿ ವಲಸೆ ಕಾರ್ಮಿಕರ, ಕೂಲಿಗಾರರ ಸಮಸ್ಯೆಗಳನ್ನು ನಿವಾರಿಸಲು ಅತ್ಯಂತ ಹೆಚ್ಚಿಗೆ ಗಮನವನ್ನು ನೀಡಿರುವುದು ಗಮನಕ್ಕೆ ಬರುತ್ತದೆ. ಈ ಹಿಂದೆ ಈಗಾಗಲೇ ಘೋಷಿಸಲಾಗಿದ್ದ ಒಂದು  ದೇಶ, ಒಂದು ಪಡಿತರ ಚೀಟಿ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈಗ ಹೆಜ್ಜೆ ಇಡಲಾಗಿದೆ. ಆ ಮೂಲಕ ಯಾವುದೇ ಕೂಲಿ ಕಾರ್ಮಿಕ ತನ್ನಲ್ಲಿನ ಪಡಿತರ ಚೀಟಿಯನ್ನು ಬಳಸಿ ಕೊಂಡು ದೇಶದ ಯಾವುದೇ ನಗರ, ಪಟ್ಟಣ, ಹಳ್ಳಿ ಯಲ್ಲಿನ ನ್ಯಾಯಬೆಲೆ ಅಂಗಡಿಯಿಂದ ತನಗೆ ಸಿಗ ಬೇಕಾದ ಧವಸ, ಧಾನ್ಯಗಳನ್ನು ಪಡೆಯಬಹುದಾಗಿದೆ. ಇದು ಅನೇಕ ಕೂಲಿಗಾರರ ಹಸಿವನ್ನು ರಾಜ್ಯಗಳ ಗಡಿಯ ಹಂಗಿಲ್ಲದೆ ನೀಗಿಸು ತ್ತದೆ.

ಕೂಲಿಗಳ ಹಸಿವನ್ನು ನೀಗಿಸಿದ ನಂತರ  ವರ ಕೈಗಳಿಗೆ ದುಡಿಮೆಯನ್ನು ಕೊಡಲು ತೀರ್ಮಾನಿಸಲಾ ಗಿದೆ ಹಾಗೂ ದುಡಿದ ದುಡಿಮೆಗೆ ಸೂಕ್ತ ಕೂಲಿ ಯನ್ನೂ ಸಿಗುವಂತೆ ಪ್ರಯತ್ನ ಮಾಡಲಾಗಿದೆ. ಆ ಕಾರಣಕ್ಕಾಗಿಯೇ, ಕೂಲಿ ಕಾರ್ಮಿಕರ ನಿಗದಿತ ಕೂಲಿಯನ್ನು ಹೆಚ್ಚಿಸುವ, ನಗರ  ಪ್ರದೇಶಗಳಿಗೆ ಕೂಲಿಗಾಗಿ ವಲಸೆ ಬರುವ ಕಾರ್ಮಿಕರಿಗೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳನ್ನು ವಸತಿ ಸಮುತ್ಛಯವಾಗಿ ಪರಿವರ್ತಿಸಿ ಕೂಲಿಗಾರರ ಕೈಗೆಟಕುವ ಬೆಲೆಯಲ್ಲಿ ಬಾಡಿಗೆಗೆ ನೀಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾ ಗಿದೆ. ಇನ್ನು, ಅವರ ಕೂಲಿಯನ್ನು ಹೆಚ್ಚಿಸುವುದ ಕ್ಕಾಗಿ, ಕಾರ್ಮಿಕ ನೀತಿಗಳಲ್ಲೇ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೊಳಗಾಗಿರುವ ಬೀದಿ ಬದಿಯ ವ್ಯಾಪಾರಿಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಅವರಿಗೆ  ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಸಾಲ ವಿತರಣೆಗೆ ಮುಂದಾಗಿದೆ. ಅಂದರೆ, ಪ್ರತಿ ಬೀದಿ ಬದಿಯ ವ್ಯಾಪಾರಿಗೆ ತನ್ನ ವ್ಯಾಪಾರ ಪುನರಾರಂಭಿಸಲು 10,000 ರೂ.ಗಳನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ  ನೋಂದಾಯಿಸಲ್ಪ ಟ್ಟಿರುವ ಸುಮಾರು 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಇನ್ನು, ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದವರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 2 ಲಕ್ಷ  ಕೋಟಿ ರೂ. ಸಾಲ ವ್ಯವಸ್ಥೆ,

ಇದರಿಂದ ರೈತರು ಮಾತ್ರವಲ್ಲದೆ, ಮೀನು ಗಾರರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ವರಿಗೂ ಇದರ ಉಪಯೋಗವನ್ನು ಪಡೆಯಬಹು ದಾಗಿದೆ. ಹೊಸದಾಗಿ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌  ಇಲ್ಲದ ರೈತರಿಗಾಗಿ ಹೊಸ ಕ್ರಿಸಾನ್‌ ಕ್ರೆಡಿಟ್‌ ಕಾರ್ಡ್‌ ಗಳನ್ನು ನೀಡಲು ನಿರ್ಧರಿಸಲಾಗಿದೆ. ಇನ್ನು, ಮುದ್ರಾ ಯೋಜನೆಯಡಿ ನೀಡಲಾ ಗುವ ಶಿಶು ಸಾಲದ ಮೇಲೆ ವಿಧಿಸಲಾಗುತ್ತಿದ್ದ ಬಡ್ಡಿ ಯಲ್ಲಿ ಶೇ. 2ರಷ್ಟನ್ನು ಕಡಿಮೆ ಮಾಡುವಂಥ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ, ಈ ವಲಯದಲ್ಲಿ ಸಾಲಗಾರರ ಮೇಲೆ ಬೀಳುತ್ತಿದ್ದ ಬಡ್ಡಿಯ ಹೊರೆಯಲ್ಲಿ 15,000 ಕೋಟಿ ರೂ. ಕಡಿಮೆ ಯಾಗಲಿದೆ. ಜೊತೆಗೆ, 3 ಕೋಟಿ ಜನರಿಗೆ  ಇದರ ಉಪಯೋಗವಾಗಲಿದೆ ಎಂದು  ಹಣಕಾಸು ಸಚಿವರು ತಿಳಿಸಿದ್ದಾರೆ.

ಇದರ ಜೊತೆಗೆ, ಉಚಿತ ಧಾನ್ಯ ವಿತರಣೆ, ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಗೆ ಕೇಂದ್ರ ನೀಡಿರುವ 11,000 ಕೋಟಿ ರೂ.ಗಳ ನ್ನು ನಗರದಲ್ಲಿರುವ ಬಡವರ ಸಬಲೀಕರಣಕ್ಕೆ ಬಳಸಿಕೊಳ್ಳಲು ಕೇಂದ್ರ  ಸೂಚಿಸಿದೆ. ಇನ್ನು ಕೆಳ ಮಧ್ಯಮ ಕುಟುಂಬಗಳ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಸಬ್ಸಿಡಿಯ ಸಹಾ ಯದೊಂದಿಗೆ ಸ್ವಂತ ಮನೆ ಕಲ್ಪಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 70,000 ಕೋಟಿ ರೂ.  ನೀಡಲು ತೀರ್ಮಾನಿಸಲಾ ಗಿದೆ. ಇದಲ್ಲದೆ, ಹೊಸದಾಗಿ 7,200 ಹೊಸ ಸ್ವಸಹಾ ಯ ಗುಂಪುಗಳನ್ನು ರಚಿಸಲು ತೀರ್ಮಾನಿಸಲಾ ಗಿದೆ. ಇನ್ನು, ಕ್ಯಾಂಪಾ ಯೋಜನೆಯಡಿಯಲ್ಲಿ ಆದಿ ವಾಸಿಗಳಿಗೆ ಉದ್ಯೋಗಾವಕಾಶದಂಥ ಯೋಜನೆ ಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಇನ್ನೂ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬಡವರ, ಕೂಲಿಗಳ, ನಿರ್ಗತಿಕರ, ರೈತರ ಅಭಿವೃದಿಗೆ ಕ್ರಮ ಕೈಗೊಳ್ಳಲಾಗಿದೆ.

ಕಾರ್ಮಿಕರಿಗೆ ನರೇಗಾ ನೆರವು: ಕಾರ್ಮಿಕರಿಗೆ ನೆರವು ನೀಡಲು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನು ಹೆಚ್ಚಿಸಲಾಗುತ್ತಿದೆ. 2020 ಮೇ 13ರವರೆಗೆ 14.62 ಕೋಟಿ ಮಾನವ ದಿನಗಳಷ್ಟು ಕೆಲಸ ಸೃಷ್ಟಿಸಲಾಗಿದೆ. ಇಲ್ಲಿಯವರೆಗೆ 10,000 ಕೋಟಿ ರೂ. ಖರ್ಚಾಗಿದೆ. 1.87 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿನ 2.33 ಕೋಟಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. 2019 ಮೇ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಶೇ. 40ರಿಂದ 50ರಷ್ಟು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ. ಸರಾಸರಿ ದಿನಗೂಲಿ 182 ರೂ.ಗಳಿಂದ 202 ರೂ.ಗಳಿಗೇರಿದೆ. ತಂತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಿರುವ ವಲಸಿಗರಿಗೆ ನೆರವು ನೀಡಲು ರಾಜ್ಯಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

arrested

Salman Khan ನಿವಾಸಕ್ಕೆ ಫೈರಿಂಗ್‌: ಶಂಕಿತ ಇಬ್ಬರ ಬಂಧನ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.