ಎನ್ಕೌಂಟರ್: 4 ಜೈಶ್ ಉಗ್ರರ ಹತ್ಯೆ
Team Udayavani, Jun 8, 2019, 6:00 AM IST
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಜ್ರಾಲ್ ಎಂಬಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ‘ಜೈಶ್ ಎ ಮೊಹಮ್ಮದ್’ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರರು ಹತರಾಗಿದ್ದಾರೆ. ಇವರಲ್ಲಿ ಇಬ್ಬರು ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಮಾಜಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದು(ಎಸ್ಪಿಒ), ಇತ್ತೀಚೆಗಷ್ಟೇ ನೌಕರಿ ತೊರೆದು ಉಗ್ರವಾದಿಗಳಾಗಿದ್ದರು.
ಮೃತಪಟ್ಟ ಉಗ್ರರನ್ನು ಆಶಿಕ್ ಹುಸೇನ್ ಗನಿ (ಪುಲ್ವಾಮದ ಪಂಜ್ರನ್ ಮೂಲ), ಇಮ್ರಾನ್ ಅಹ್ಮದ್ ಬಟ್ (ಪುಲ್ವಾಮಾದ ಅರಿಹಾಲ್ ಮೂಲ) ಎಂದು ಗುರುತಿಸಲಾಗಿದ್ದು, ಮಾಜಿ ಎಸ್ಪಿಒಗಳನ್ನು ಮೊಹ ಮ್ಮದ್ ಸಲ್ಮಾನ್ ಖಾನ್ (ಶೋಪಿಯಾನ್ನ ಉತ್ಮಾ ಮುಲ್ಲಾ ) ಹಾಗೂ ಶಬೀರ್ ಅಹ್ಮದ್ ದಾರ್ (ಪುಲ್ವಾ ಮಾದ ತುಜಾನ್ ಮೂಲ) ಎಂದು ಗುರುತಿಸಲಾಗಿದೆ.
ಆರು ಗೂಢಾಚಾರಿಗಳ ಬಂಧನ: ಈ ನಡುವೆ, ಪಾಕಿಸ್ತಾನದ ಐಎಸ್ಐ ಆಣತಿ ಮೇರೆಗೆ ಜಮ್ಮು ಪ್ರಾಂತ್ಯದಲ್ಲಿ ಉಗ್ರವಾದಿ ಚಟುವಟಿಕೆಗೆ ಸಹಕಾರ ನೀಡುತ್ತಿದ್ದ ಪಾಕ್ ಮೂಲದ ಆರು ಗೂಢಾಚಾರಿಗಳನ್ನು ಬಂಧಿಸಲಾಗಿದೆ. ಈ ಆರೂ ಜನರು, ಐಎಸ್ಐನ ಹಿರಿಯ ಅಧಿಕಾರಿ ಇಫ್ತಿಖಾರ್ ಎಂಬುವನೊಂದಿಗೆ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಯೊಂದಿಗೆ ನೇರ ಸಂಪರ್ಕದಲ್ಲಿದ್ದು, ಜಮ್ಮುವಿನಲ್ಲಿ ದಾಳಿ ನಡೆಸಬಹುದಾದ ಅತಿ ಸೂಕ್ಷ್ಮ ಪ್ರಾಂತ್ಯಗಳ ಫೋಟೋಗಳು, ವಿಡಿಯೋಗಳನ್ನು ಚಿತ್ರಿಸಿ ಅವುಗಳನ್ನು ಐಎಸ್ಐಗೆ ರವಾನಿಸುತ್ತಿದ್ದರೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ