ಛತ್ತೀಸ್ಗಢ: ಮಾವೋ ಉಗ್ರರ ವಿರುದ್ಧ ಎನ್ಕೌಂಟರ್ , 9 ಮಂದಿ ಬಂಧನ
Team Udayavani, May 11, 2017, 11:59 AM IST
ರಾಯಪುರ : ಛತ್ತೀಸ್ಗಢದ ಪಂಖಜೂರ್ ಎಂಬಲ್ಲಿ ಇಂದು ಗುರುವಾರ ಬೆಳಗ್ಗೆ ಬಿಎಸ್ಎಫ್ ಯೋಧರು ಮತ್ತು ಮಾವೋ ಉಗ್ರರ ನಡುವೆ ಭೀಕರ ಎನ್ಕೌಂಟರ್ ನಡೆದಿದೆ.
ಕಳೆದ ಎಪ್ರಿಲ್ 24ರಂದು ಸುಕ್ಮಾದಲ್ಲಿ 25 ಸಿಆರ್ಪಿಎಫ್ ಯೋಧರನ್ನು ಮಾವೋ ಉಗ್ರರು ಹತ್ಯೆಗೈದ ಬಳಿಕದಲ್ಲಿ ಇಂದು ಗುಂಡಿನ ಕಾಳಗ ನಡೆದಿದೆ. ಚಿಂತಾಗುಫಾ ಪ್ರದೇಶದತ್ತ ಸಾಗುವ ರಸ್ತೆ ತೆರವಿನ ಯೋಧರ ಮೇಲೆ ಮಾವೋ ಉಗ್ರರು ಗುಂಡಿನ ದಾಳಿ ನಡೆಸಿದರು.
ಎನ್ಕೌಂಟರ್ ಬಳಿಕ ಸಿಆರ್ಪಿಎಫ್ ಯೋಧರು ಚಿಂತಲನಾರ್ ಮತ್ತು ಚಿಂತಾಗುಫಾ ಎಂಬಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಿದರು.
ಮಾವೋ ಉಗ್ರರ ಹುಟ್ಟಡಗಿಸಲು ಅವರಿಗೆ ಹಣ ಪೂರೈಕೆಯಾಗುವ ಮಾರ್ಗಗಳು ಹಾಗೂ ಮೂಲಗಳನ್ನು ನಾಶಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮೊನ್ನೆ ಸೋಮವಾರ ಕರೆ ನೀಡಿದ್ದರಲ್ಲದೆ “ಸಮಾಧಾನ್’ ಎಂಬ ಹೊಸ “ನಕ್ಸಲ್ ನಿಗ್ರಹ ವ್ಯೂಹಗಾರಿಕೆ’ಯನ್ನು ಅನಾವರಣಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ