ಎನ್ಕೌಂಟರ್: ಉಗ್ರರು, ಬಾಲಕಿ ಸಾವು
Team Udayavani, Mar 16, 2017, 3:50 AM IST
ಶ್ರೀನಗರ: ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಇದೇ ವೇಳೆ ಅಪ್ರಾಪ್ತ ಬಾಲಕಿಯೋರ್ವಳು ಮೃತಪಟ್ಟಿದ್ದಾಳೆ. ಬುಧವಾರ ಬೆಳಗಿನ ಜಾವ ಭದ್ರತಾ ಪಡೆಗಳು ಕುಪ್ವಾರದ ಕಾಲಾರೋಸ್ ಗ್ರಾಮವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿವೆ. ಗುಂಡಿನ ಚಕಮಕಿ ವೇಳೆ ಬಾಲಕಿಗೆ ಗುಂಡು ತಗಲಿ ಮೃತಪಟ್ಟಿದ್ದಾಳೆ. ಜತೆಗೆ ಆಕೆಯ ಸಹೋದರ ಫೈಸಲ್, ಪೊಲೀಸರಿಗೂ ಗಾಯಗಳಾಗಿವೆ.