ಮಳೆ ಬಿದ್ದರೂ ದೆಹಲಿಗೆ ಸಿಗದು ನೆಮ್ಮದಿ
Team Udayavani, Nov 2, 2019, 11:10 PM IST
ಹೊಸದಿಲ್ಲಿ: ಅತ್ಯಂತ ಗಂಭೀರ ಪ್ರಮಾಣದಲ್ಲಿ ಹೊಸದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿದಿರುವ ಪರಿಸ್ಥಿತಿ ಶನಿವಾರವೂ ಸುಧಾರಣೆಯಾಗಿಲ್ಲ. ನ.7-8ರ ವರೆಗೆ ಈ ಸ್ಥಿತಿ ಮುಂದುವರಿ ಯಲಿದೆ. ಇದರ ಜತೆಗೆ ಸದ್ಯದಲ್ಲೇ ಸ್ವಲ್ಪಮಟ್ಟಿಗೆ ದೆಹಲಿಯಲ್ಲಿ ಮಳೆ ಸುರಿಯಲಿದೆಯಾದರೂ ಪರಿಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆಯಾದರೂ, ಧಾರಾಕಾರ ಮಳೆಯಾಗಲಾರದು. ನ.4ರಿಂದ ಪ್ರತಿ ಗಂಟೆಗೆ 10-20ಕಿಮೀ ವೇಗದಲ್ಲಿ ಗಾಳಿ ಬೀಸಲಿರುವುದರಿಂದ ಕೊಂಚ ಬದಲಾವಣೆಯಾಗುವ ಸಾಧ್ಯತೆ ಎಂದು ಐಎಂಡಿ ಮುನ್ಸೂಚನೆ ಹೇಳಿದೆ. ಪಂಜಾಬ್, ಹರ್ಯಾಣದಲ್ಲಿಯೂ ಗಾಳಿಯ ಗುಣಮಟ್ಟ ಅತ್ಯಂತ ಗಂಭೀರ ಸ್ಥಿತಿಯಿಂದ ಕೂಡಿದೆ. ಹೊಲಗಳಲ್ಲಿನ ಭತ್ತದ ಕಳೆಗಳಿಗೆ ಬೆಂಕಿ ಹಚ್ಚಿರುವುದರಿಂದ ಎದ್ದಿರುವ ಹೊಗೆ ಹೊಸದಿಲ್ಲಿ ಮಾತ್ರವಲ್ಲ ಪಂಜಾಬ್, ಹರ್ಯಾಣಗಳಿಗೂ ವ್ಯಾಪಿಸಿದೆ.
34 ಮಂದಿ ಬಂಧನ: ವಾಯು ಮಾಲಿನ್ಯ ಕೈಮೀರಿದ ಸ್ಥಿತಿ ಇರುವ ಹೊರತಾಗಿಯೂ ನಿರ್ಮಾಣ ಕಾರ್ಯ ನಡೆಸ ಬಾರದು ಎಂಬ ನಿಯಮ ಉಲ್ಲಂ ಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನೋಯ್ಡಾ, ಗ್ರೇಟರ್ ನೋಯ್ಡಾಗಳಲ್ಲಿ ಕಂಪನಿಯೊಂದರ ನಿರ್ದೇಶಕ, ಮೂವರು ಎಂಜಿನಿಯರ್ಗಳು ಸೇರಿದಂತೆ 34 ಮಂದಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ