ಭಾರತದಲ್ಲಿ ಮಳೆಗೆ ಪ್ರತಿ ದಿನ 5 ಬಲಿ ; ಏಳು ದಶಕದಲ್ಲಿ 1 ಕೋಟಿಗೂ ಅಧಿಕ ಸಾವು


Team Udayavani, Jul 29, 2019, 7:24 PM IST

Calamity-726

ಮಣಿಪಾಲ: ಹವಾಮಾನ ಯಾವುದೇ ಸಂದರ್ಭದಲ್ಲ್ಲೂ ಕೋಪಿಸಿಕೊಂಡರೆ ಅದಕ್ಕೆ ಬಲಿಯಾಗುವುದು ಮಾತ್ರ ಜನ ಸಾಮಾನ್ಯರೇ. ಮಳೆ ಕೊರತೆಯಾಗಿ ಬರ ನಿರ್ಮಾಣವಾಗಿ ಒಂದಷ್ಟು ಜನ ಗುಳೆ ಹೋಗುತ್ತಾರೆ. ಕೆಲವರು ಸ್ಥಳಾಂತರಗೊಳ್ಳುವ ಸಾಮರ್ಥ್ಯವಿಲ್ಲದೆ ಬರಕ್ಕೆ ಬಲಿಯಾಗುತ್ತಾರೆ.

ಈ ನಡುವೆ ಕೃಷಿ ತೋಟಗಳಿಗೆ ಬಿಡಿ, ಕುಡಿಯಲು ನೀರಿಲ್ಲದೆ ಸಾಯುವವರು ಅನೇಕರು. ಇನ್ನು ಚಳಿಗಾಲ ಬಂತು ಎಂದಿಟ್ಟುಕೊಳ್ಳಿ, ದೇಶದ ಕೆಲವು ಪ್ರದೇಶಗಳಲ್ಲಿ ಮೈನಸ್ ಉಷ್ಟಾಂಶ ದಾಖಲಾಗುತ್ತದೆ. ಪರಿಣಾಮವಾಗಿ ಚಳಿಗೆ ನಡುಗಿ ಒಂದಷ್ಟು ಮಂದಿ ಮೃತಪಡುತ್ತಾರೆ. ಇನ್ನು ಸಿಡಿಲಿನ ಆಘಾತಕ್ಕೆ ಒಳಗಾದ ಜನರೂ ಇದ್ದಾರೆ.

ಇನ್ನು ಬೇಸಗೆಯಲ್ಲಿ ಆಗಸದತ್ತ ಮುಖ ಮಾಡುವ ಜನರೇ ಕಾಣಸಿಗುತ್ತಾರೆ. ಪೂರ್ವ ಮುಂಗಾರು ಸುರಿಯಲು ಇನ್ನೂ ಸಮಯವಿದ್ದರೂ ಮಳೆ ಇಲ್ಲ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಇದು ತಪ್ಪಲ್ಲ. ಮಳೆ ಬಂತು. ‘ಧಾರಾಕಾರವಾಗಿ ಬಿಡದೇ ಸುರಿಯಲು ಆರಂಭವಾಯಿತು. ಜನರು ಇಲ್ಲಿ ಮತ್ತೆ ತೊಂದರೆಗೆ ಒಳಗಾಗುತ್ತಾರೆ. ನಗರಗಳ ಸ್ಲಂಗಳಲ್ಲಿ ವಾಸಿಸುವ ಜನ ಜೀವನ ಮಳೆ ಬಂದ ಸಂದರ್ಭ ಹೇಳತೀರದು.

ಮೂಲ ಸೌಕರ್ಯಗಳ ಕೊರತೆ ಎದುರಾಗಿ ಜನರು ವಾಸಿಸುತ್ತಿದ್ದ ಪ್ರದೇಶದತ್ತ ನೀರು ಹರಿಯುತ್ತದೆ. ನಿದ್ದೆಯಲ್ಲಿದ್ದ ಸಂದರ್ಭ ಅವರ ಮೇಲೆ ನೀರು ಹರಿದ ನಿದರ್ಶನಗಳೂ ಇವೆ. ಮಾತ್ರವಲ್ಲದೇ ನೀರಿಗೆ ಕೊಚ್ಚ ಹೋದ ಉದಾಹರಣೆಗಳೂ ಇವೆ. ಹೀಗೆ ಚಳಿಗಾಲ, ಮಳೆಗಾಲ ಮತ್ತು ಬೇಸಗೆಯಲ್ಲಿ ಬಲಿಯಾಗುವುದು ಮಾತ್ರ ಮುಗ್ಧ ಜನರು ಮತ್ತು ಅಮಾಯಕ ಪ್ರಾಣಿಗಳು.

6,585 ಜನ ಬಲಿ
ದೇಶದ ಕೆಲವು ಪ್ರದೇಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ. ಈ ವರ್ಷವೂ ಕೆಲವು ಭಾಗಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳೆಯಾಗಿದೆ. ದೇಶದಲ್ಲಿ ಕಳೆದ 3 ವರ್ಷದಲ್ಲಿ ಈ ತಿಂಗಳಾಂತ್ಯಕ್ಕೆ ಸುಮಾರು 6,585 ಜನ ವಿವಿಧ ರೀತಿಯ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. ಬಿರುಗಾಳಿ, ಪ್ರವಾಹ, ಭೂ ಕುಸಿತ ಮೊದಲಾದವುಗಳ ಪರಿಣಾಮವಾಗಿ ಜನ ಪ್ರಾಣ ತೆತ್ತಿದ್ದಾರೆ.

ಬಿಹಾರ ಮತ್ತು ಅಸ್ಸಾಂನಲ್ಲಿ ಕಳೆದ ವಾರ ಸಂಭವಿಸಿದ ತೀವ್ರ ಪ್ರವಾಹದಲ್ಲಿ 170 ಜನರು ಸಾವಿಗೀಡಾಗಿದ್ದಾರೆ. ಇಲ್ಲಿ 10 ಮಿಲಿಯನ್ ಜನರು ತೊಂದರೆಗೆ ಒಳಗಾಗಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 204 ಪ್ರಾಣಿಗಳು ಬಲಿಯಾಗಿವೆ.

ಕಳೆದ ವರ್ಷ ಕೇರಳದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿತ್ತು. 94 ವರ್ಷಗಳ ಬಳಿಕ ಕೇರಳ ಕಂಡ ಪ್ರವಾಹ ಅದಾಗಿತ್ತು. ಇಲ್ಲಿ 477 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಬಿಹಾರದಲ್ಲಿ 970, ಕೇರಳದಲ್ಲಿ 756, ಪಶ್ಚಿಮ ಬಂಗಾಲದಲ್ಲಿ 663, ಮಹಾರಾಷ್ಟ್ರದಲ್ಲಿ 522 ಮತ್ತು ಹಿಮಾಚಲ ಪ್ರದೇಶದಲ್ಲಿ 458 ಮಂದಿ ಅತಿ ವೃಷ್ಟಿಗೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ಸುಮಾರು 2 ಲಕ್ಷ ಕುಟುಂಬಗಳು ಹಾನಿಗೀಡಾಗಿವೆ. ಈ ವರ್ಷ ದೇಶದಲ್ಲಿ ಎಪ್ರಿಲ್ ಬಳಿಕ 496 ಮಂದಿ ಸಾವಿಗೀಡಾಗಿದ್ದಾರೆ.

64 ವರ್ಷದಲ್ಲಿ ಸುಮಾರು 1 ಕೋಟಿ ಸಾವು
1953ರ ಬಳಿಕ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಂದಿ ಮಳೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. 40 ಮಿಲಿಯನ್ ಹೆಕ್ಟರ್ ಭೂ ಪ್ರದೇಶಗಳು ಜಲಾವೃತವಾಗಿದೆ. ಕಳೆದ 3 ದಶಕಗಳಲ್ಲಿ 431 ಅಪಾಯದ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.