ಥಾರ್ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ
Team Udayavani, Oct 23, 2020, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಜಸ್ಥಾನ ಥಾರ್ ಮರುಭೂಮಿಯಲ್ಲಿ ನದಿಯೊಂದು ಹರಿಯುತ್ತಿತ್ತು. ಯಾವಾಗ? ಕಳೆದ ವರ್ಷವೋ ಅಥವಾ ಅದಕ್ಕಿಂತ ಹಿಂದಿನ ವರ್ಷವೋ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಬೇಡಿ. 1,72,000 ವರ್ಷಗಳ ಹಿಂದೆ ಶಿಲಾಯುಗದಲ್ಲಿ ನದಿ ಹರಿಯುತ್ತಿತ್ತು ಮತ್ತು ಅದು ಜನರ ಜೀವನಾಡಿಯಾಗಿತ್ತು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಎಜುಕೇಶನ್ ಆ್ಯಂಡ್ ರಿಸರ್ಚ್, ಚೆನ್ನೈನ ಅಣ್ಣಾ ವಿವಿ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ದ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ (ಎಂಪಿಐ-ಎಸ್ಎಚ್ಎಚ್) ನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಅಂಶ ಉಲ್ಲೇಖಗೊಂಡಿದೆ.
ಆ ವರ್ಷಗಳಲ್ಲಿ ಹಲವಾರು ಬಾರಿ ನಾಗರಿಕತೆಗೆ ಇದು ಜೀವ ಸೆಲೆಯಾಗಿದ್ದಿರಬಹುದು ಎಂದು “ಕ್ವಾರ್ಟರ್ಲಿ ಸೈನ್ಸ್ ರಿವ್ಯೂ’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧ ಹೇಳಿದೆ. ಬಿಕಾನೇರ್ ವ್ಯಾಪ್ತಿಯಲ್ಲಿ ಈ ನದಿ ಇತ್ತು. 80 ಸಾವಿರ ವರ್ಷಗಳ ಹಿಂದೆ ಥಾರ್ ಮರುಭೂಮಿ ವ್ಯಾಪ್ತಿಯಲ್ಲಿ ನದಿ ಸಕ್ರಿಯವಾಗಿತ್ತು. ಬಿಕಾನೇರ್ ಸಮೀಪದ ನಲ್ ಎಂಬ ಗ್ರಾಮದಲ್ಲಿ 2014ರಿಂದ 2019ರ ವರೆಗೆ ನಡೆಸಲಾಗಿರುವ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ.
ಜರ್ಮನಿಯ ಎಂಪಿಐ-ಎಸ್ಎಚ್ಎಚ್ನ ವಿಜ್ಞಾನಿ ಜೇಮ್ಸ್ ಬ್ಲಿಂಕಾರ್ನ್ ಹೊಸ ಶೋಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, “ನದಿ ಇತ್ತು ಎಂಬುದನ್ನು ಶಾಖವಿಲ್ಲದೆ ಉತ್ಪತ್ತಿಯಾಗಿರುವ ಬೆಳಕಿನ ತಂತ್ರಜ್ಞಾನದ ಮೂಲಕ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಥಾರ್ ವ್ಯಾಪ್ತಿಯಲ್ಲಿ 80 ಸಾವಿರ ವರ್ಷಗಳ ಹಿಂದೆ ನದಿ ಇತ್ತು ಎಂಬ ಬಗ್ಗೆ ರಾಜಸ್ಥಾನದ ಲುನಿ ನದಿ ತೀರ ಪ್ರದೇಶದಲ್ಲಿ ಅಧ್ಯಯನ ನಡೆಸಲಾಗಿತ್ತು. ಮಹಿ, ಸಬರಮತಿ, ಒರ್ಸಾಂಗ್ ನದಿ ಕಣಿವೆ ವ್ಯಾಪ್ತಿಯಲ್ಲಿಯೂ ಈ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಥಾರ್ ವ್ಯಾಪ್ತಿಯಲ್ಲಿ ನದಿ ಇದ್ದದ್ದು ದೃಢಪಟ್ಟಿದೆ ಎಂದು ಬ್ಲಿಂಕಾರ್ನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ