ಆರು ಮಂದಿಯ ಕೊಂದ ನಿವೃತ್ತ ಯೋಧ
Team Udayavani, Jan 3, 2018, 11:32 AM IST
ಪಾಲ್ವಾಲ್ (ಹರಿಯಾಣ): ಮಾನಸಿಕ ಅಸ್ವಸ್ಥನಾಗಿದ್ದ ನಿವೃತ್ತ ಯೋಧನೊಬ್ಬ ಮಂಗಳವಾರ ಬೆಳಗ್ಗಿನ ಜಾವ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಆರು ಮಂದಿಯನ್ನು ಕಬ್ಬಿಣದ ರಾಡ್ನಿಂದ ಬಡಿದು ಹತ್ಯೆ ಮಾಡಿರುವ ಘಟನೆ ಪಾಲ್ವಾಲ್ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.
ಆರೋಪಿ ನರೇಶ್ ಧನ್ಕಾದ್ (45) ಸೇನೆಯಲ್ಲಿ ದ್ದಾಗಲೇ ವೈದ್ಯಕೀಯ ಕಾರಣಗಳಿಗಾಗಿ ನಿವೃತ್ತಿ ಪಡೆದಿದ್ದ. ಪಾಲ್ವಾಲ್ ಜಿಲ್ಲೆಯ ಬಲ್ಲಾಭ್ಗಢದ ಬಳಿಯ ಮಚ್fಗರ್ ಎಂಬ ಪ್ರಾಂತ್ಯದಲ್ಲಿ ವಾಸಿಸು ತ್ತಿದ್ದ ಈತ, ಕೃಷಿ ಇಲಾಖೆಯಲ್ಲಿ ಸಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದ. ಮಂಗಳವಾರ ಮಧ್ಯರಾತ್ರಿ 2 ಗಂಟೆಗೆ ಕಬ್ಬಿಣದ ರಾಡ್ ಕೈಯಲ್ಲಿ ಹಿಡಿದು ಮನೆಯಿಂದ ಹೊರಬಿದ್ದ ಈತ ಕೇವಲ 2 ಗಂಟೆಯ ಅವಧಿ ಯಲ್ಲೇ ಆರು ಮಂದಿಯನ್ನು ಬಲಿಪಡೆದಿದ್ದಾನೆೆ. ಸೂರ್ಯೋದಯ ನಂತರ ಇವನು ಸಿಕ್ಕಿಬಿದ್ದಿದ್ದು, ಬಂಧನದ ವೇಳೆ ಪೊಲೀಸ್ ಪೇದೆಯೊಬ್ಬರ ತಲೆಗೆ ಹೊಡೆದಿದ್ದಾನೆ. ಪೇದೆಯನ್ನು ಫರಿದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ