ದುಷ್ಕರ್ಮಿಗಳಿಂದ ಅಬಕಾರಿ ಸಬ್ ಇನ್ಸ್ಪೆಕ್ಟರ್ ಹತ್ಯೆ
Team Udayavani, May 4, 2018, 11:38 AM IST
ಕೋಕ್ರಝಾರ್, ಅಸ್ಸಾಂ : ಕೋಕ್ರಝಾರ್ ಜಿಲ್ಲೆಯ ಉಲ್ಟಾಪಾನಿ ಅರಣ್ಯ ಸಮೀಪ ಅಪರಿಚಿತ ಹಂತಕರು ಓರ್ವ ಅಬಕಾರಿ ಸಬ್ ಇನ್ಸ್ಪೆಕ್ಟರ್ ಓರ್ವರನ್ನು ಹತ್ಯೆ ಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೋಕ್ರಝಾರ್ ಪಟ್ಟಣಕ್ಕೆ ಸಮೀಪದ ಸರಳಪಾರಾದಲ್ಲಿನ ತಮ್ಮ ಮನೆಗೆ ಎಸ್ಐ ನಾರಾಯಣ ಭೋರಾಲ್ ಅವರು ಬುಧವಾರ ರಾತ್ರಿ ಮರಳುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿ ಅವರನ್ನು ಕೊಲೆಗೈದರು.
ಎಸ್ ಐ ಹತ್ಯೆಯನ್ನು ಆಲ್ ಅಸ್ಸಾಂ ಗೋರ್ಖಾ ವಿದ್ಯಾರ್ಥಿ ಸಂಘ, ಅಸ್ಸಾಂ ನೇಪಾಲಿ ಸಾಹಿತ್ಯ ಸಭಾ ಮತ್ತು ಇತರ ಅನೇಕ ಸಂಘಟನೆಗಳು ಖಂಡಿಸಿದ್ದು ಹಂತಕರ ಕ್ಷಿಪ್ರ ಬಂಧನಕ್ಕೆ ಆಗ್ರಹಿಸಿವೆ.