ಫೇಸ್‌ ಬುಕ್‌ ಝುಕರ್‌ಬರ್ಗ್‌ಗೆ ಸಮನ್ಸ್‌ ಸಾಧ್ಯತೆ


Team Udayavani, Mar 22, 2018, 6:00 AM IST

Untitled-1.jpg

ಹೊಸದಿಲ್ಲಿ: ಲಂಡನ್‌ ಮೂಲದ ರಾಜಕೀಯ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾಗೂ ಭಾರತಕ್ಕೂ ನಂಟಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಭಾರತದ ಮತದಾರರ ಮೇಲೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.

ಈ ಮಧ್ಯೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಜತೆಗಿನ ನಂಟಿನ ಸಂಬಂಧ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರವೇ ನಡೆದಿದೆ. 2019ರ ಲೋಕಸಭೆ ಚುನಾವಣೆಗಾಗಿ ರಾಹುಲ್‌ ಗಾಂಧಿ ಇಮೇಜ್‌ ವೃದ್ಧಿಸಲು ಇದೇ ಕಂಪೆನಿ ಜತೆ ಕಾಂಗ್ರೆಸ್‌ ಒಡಂಬಡಿಕೆ ಮಾಡಿ ಕೊಂಡಿದೆ ಎಂದು ಬಿಜೆಪಿ ಆರೋಪಿಸಿದ್ದರೆ, 2010ರಲ್ಲಿ ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಕೂಟಕ್ಕೆ ನೆರವಾಗಿದ್ದು ಇದೇ ಸಂಸ್ಥೆಯಲ್ಲವೇ? ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲ್ಲುತ್ತಿದ್ದಂತೆ, ರಾಹುಲ್‌ ಗಾಂಧಿ ಅವರ ಇಮೇಜ್‌ ವೃದ್ಧಿಗಾಗಿ ಇದೇ ಸಂಸ್ಥೆಯನ್ನು ಸಂಪರ್ಕಿಸಿರುವ ವಿಚಾರ ಕಳೆದ ಅಕ್ಟೋಬರ್‌ನಲ್ಲೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಡೀ ಹಗರಣ ಬಯಲಿಗೆ ಬೀಳುತ್ತಿದ್ದಂತೆ, ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಕೇಂದ್ರ ಕಾನೂನು ಮತ್ತು ಮಾಹಿತಿ, ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌, ಈ ಸಂಸ್ಥೆಯೊಂದಿಗೆ ಕಾಂಗ್ರೆಸ್‌ ಯಾವ ರೀತಿಯ ನಂಟು ಹೊಂದಿದೆ ಎಂಬುದನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಖುದ್ದು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ನ್ಯೂಯಾರ್ಕ್‌ ಮೂಲಕ ಸಂಸ್ಥೆಯ ಸಿಇಒ ಅವರನ್ನು ರಾಹುಲ್‌ ಎಷ್ಟು ಬಾರಿ ಭೇಟಿಯಾಗಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಝುಕರ್‌ ಬರ್ಗ್‌ಗೇ ಸಮನ್ಸ್‌: ಅಲ್ಲದೆ ಭಾರತದಲ್ಲೂ ಯಾವುದೇ ಸಾಮಾಜಿಕ ಜಾಲತಾಣವು ಇದೇ ರೀತಿ ಕೃತ್ಯ ನಡೆಸುತ್ತಿದ್ದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚ ರಿಕೆ ನೀಡಿದ್ದಾರೆ. ಜತೆಗೆ ಅಗತ್ಯವೆನಿಸಿದರೆ ಫೇಸ್‌ ಬುಕ್‌ ಸಿಇಒ ಮಾರ್ಕ್‌ ಝುಕರ್‌ ಬರ್ಗ್‌ ಅವರಿಗೂ ಸಮನ್ಸ್‌ ಕೊಟ್ಟು ಕರೆಸಿಕೊಳ್ಳುವುದಾಗಿ ಹೇಳಿದ್ದಾರೆ.

ರಮ್ಯಾ, ಸುಜೇìವಾಲಾ ತಿರುಗೇಟು: ರವಿಶಂಕರ್‌ ಪ್ರಸಾದ್‌ ಅವರ ಆರೋಪಗಳಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಹಾಗೂ ರಣ ದೀಪ್‌ ಸುಜೇìವಾಲ “”2010ರಲ್ಲಿ ಬಿಹಾರದಲ್ಲಿ ಬಿಜೆ ಪಿ-ಜೆಡಿಯು ಮೈತ್ರಿ ಕೂಟ ಗೆದ್ದಿದ್ದು ಇದೇ ಸಂಸ್ಥೆಯ ನೆರ ವಿಂದಲ್ಲವೇ? ಈ ಬಗ್ಗೆ ಉತ್ತ ರಿಸಿ” ಎಂದು ತಿರುಗೇಟು ನೀಡಿದ್ದಾರೆ. 

1. ಅಷ್ಟಕ್ಕೂ ಕೇಂಬ್ರಿಡ್ಜ್ ಅನಾಲಿ ಟಿಕಾ ಅಂದ್ರೆ ಏನು?
ಇದು ಗ್ರಾಹಕರ ಕುರಿತ ಸಂಶೋಧನೆ ಮಾಡುವ ಸಂಸ್ಥೆ. ಅಂದ್ರೆ, ನಿರ್ದಿಷ್ಠ ಗ್ರಾಹಕರ ಆಸಕ್ತಿ, ಬೇಕು ಬೇಡ ಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವುದು. ಅಲ್ಲದೆ ನಿರ್ದಿಷ್ಟ ಮಂದಿಗೆ ಜಾಹೀರಾತು ತಲುಪುವ ಮತ್ತು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತದೆ.

2. ಯಾರ ಪರ ಕೆಲಸ ಮಾಡಿದೆ?
ಈ ಸಂಸ್ಥೆ ಮೇಲ್ಪಂಕ್ತಿಗೆ ಬಂದಿದ್ದು ಅಮೆರಿಕ ಚುನಾವಣೆಯಲ್ಲಿ. ಮೊದಲು ಟೆಡ್‌ ಕ್ರೂಸ್‌ ಬಳಿಕ, ಟ್ರಂಪ್‌ ಪರವಾಗಿ ಕೆಲಸ ಮಾಡಿತು. ಬಳಿಕ ಬ್ರಿಟನ್‌ನ ಬ್ರೆಕ್ಸಿಟ್‌ ವೋಟಿಂಗ್‌ನಲ್ಲೂ “ಲೀವ್‌'(ಐರೋಪ್ಯ ಒಕ್ಕೂಟದಿಂದ ಹೊರಗೆ ಹೋಗುವ) ಪರವಾಗಿ ಕೆಲಸ ಮಾಡಿತ್ತು. ಭಾರತದ್ದು ಸೇರಿ ವಿವಿಧ ದೇಶಗಳ 200 ಚುನಾವಣೆಗಳಲ್ಲಿ ಈ ಸಂಸ್ಥೆ ಕೆಲಸ ಮಾಡಿದೆ.

3. ಸಂಸ್ಥೆಯ ಮೇಲಿರುವ ಆರೋಪವೇನು?
ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್‌ ಬುಕ್‌ನ 50 ದಶ ಲಕ್ಷ ಬಳಕೆದಾರರ ಮಾಹಿತಿ ಕದ್ದು, ಇವರ ಆಸಕ್ತಿಗಳನ್ನು ಅರಿತು ಅವರ ಮನಸ್ಸು ಬದಲಾಯಿಸಲು ಪ್ರೇರೇಪಿಸಿದ್ದು. ಆದರೆ ಈ ಆರೋಪವನ್ನು ಕಂಪೆನಿ ನಿರಾಕರಿಸಿದೆ. 

ಭಾರತಕ್ಕೆ ಏಕೆ ಆತಂಕ?
ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಫೇಸ್‌ ಬುಕ್‌ ಬಳಕೆದಾರರಿರುವುದು ಭಾರತೀಯರು. 2018ರ ಜನವರಿಯ ವರದಿ ಪ್ರಕಾರ ಭಾರತದಲ್ಲಿನ ಫೇಸ್‌ ಬುಕ್‌ ಬಳಕೆದಾರರ ಸಂಖ್ಯೆ 25 ಕೋಟಿ. ಆದರೆ, ಅಮೆ ರಿ ಕದಲ್ಲಿನ ಗ್ರಾಹ ಕರ 
ಸಂಖ್ಯೆ 23 ಕೋಟಿ.

ಟಾಪ್‌ ತ್ರಿ  ಬಳಕೆದಾರರು
ಭಾರತ 25 ಕೋಟಿ
ಅಮೆರಿಕ 23 ಕೋಟಿ
ಬ್ರೆಜಿಲ್‌ 13 ಕೋಟಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.