ಇದು ಎಲ್ಲಾ ವರ್ಗದವರಿಗೂ ಲಾಭದಾಯಕ ಬಜೆಟ್ :ಮೋದಿ ಬಣ್ಣನೆ
Team Udayavani, Feb 1, 2018, 2:42 PM IST
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಬಜೆಟ್ ಎಲ್ಲಾ ವರ್ಗದವರಿಗೂ ಲಾಭದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಬಜೆಟ್ ಮಂಡನೆಯ ಬಳಿಕ ಮಾತನಾಡಿದ ಪ್ರಧಾನಿ ‘ನಾವು ಎಲ್ಲರ ಅಶಯ,ಅಪೇಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದು, ಇದು ರೈತ ಮಿತ್ರ, ಸಾಮಾನ್ಯ ಮಿತ್ರ, ವ್ಯವಹಾರ ಮಿತ್ರ ಮತ್ತು ಅಭಿವೃದ್ಧಿ ಪರ ವಾದ ಬಜೆಟ್’ ಎಂದರು.
‘ವ್ಯವಹಾರದ ಜೊತೆ ಉದ್ಯಮ ವರ್ಗದವರಿಗೂ ಲಾಭದಾಯಕ ಬಜೆಟ್ ಆಗಿದ್ದು, 21ನೇ ಶತಮಾನದ ಭಾರತಕ್ಕಾಗಿ, ಆರೋಗ್ಯ ಸುರಕ್ಷೆಯತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದರು.
‘ರೈತರು ತಮ್ಮ ಉತ್ಪನ್ನಗಳನ್ನು ನೀಡುವ ಮೂಲಕ ದೇಶದ ವಿಕಾಸಕ್ಕೆ ಐತಿಹಾಸಿಕ ಕೊಡುಗೆ ನೀಡಿದ್ದಾರೆ.ಅವರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ನೀಡಿದ್ದೇವೆ’ ಎಂದರು.
‘ಇದು ದಲಿತ ,ಪೀಡಿತ ,ಶೋಷಿತ ಮತ್ತು ವಂಚಿತರಿಗೂ ಸಿಗುವ ಬಜೆಟ್’ ಎಂದರು.
‘ಆಹಾರ ಉತ್ಪನ್ನಗಳಿಂದ ಹಿಡಿದು, ಫೈಬರ್ ಆಪ್ಟಿಕ್ಸ್ , ರಸ್ತೆ, ಸಮುದ್ರಯಾನ, ಯುವಕರಿಂದ ಹಿರಿಯ ನಾಗರಿಕರ ವರೆಗೆ, ಗ್ರಾಮೀಣ ಭಾರತದಿಂದ ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ ದಿಂದ ಸ್ಟಾರ್ಟ್ ಅಪ್ ಇಂಡಿಯಾ ವರೆಗೆ ಈ ಬಜೆಟ್ ಕೋಟ್ಯಂತರ ಭಾರತೀಯರ ಆಸೆ ಆಕಾಂಕ್ಷೆಗಳನ್ನು ಗಟ್ಟಿಗೊಳಿಸಲಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ