ಪ್ರತಿಭಟನೆ ರೈತರ ಹಕ್ಕು : ಸುಪ್ರೀಂ ಕೋರ್ಟ್
Team Udayavani, Dec 18, 2020, 12:01 AM IST
ಹೊಸದಿಲ್ಲಿ: ಪ್ರತಿಭಟನೆ ರೈತರ ಹಕ್ಕು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಪ್ರತಿಭಟನೆ ನೆಪದಲ್ಲಿ ಬೇರೆಯವರ ಮುಕ್ತ ಓಡಾಟಕ್ಕೆ ಅಡ್ಡಿ ಮಾಡುವಂತಿಲ್ಲ, ನಗರಗಳ ಗಡಿ ಬಂದ್ ಮಾಡುವಂತಿಲ್ಲ ಎಂದೂ ಸೂಚಿಸಿದೆ.
ಹಾಗೆಯೇ ರೈತರ ಜತೆಗೆ ಪರಿಣಾಮಕಾರಿ ಮಾತುಕತೆ ನಡೆಸುವುದಕ್ಕಾಗಿ ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ಒಂದಷ್ಟು ದಿನಗಳ ಕಾಲ ಅನುಷ್ಠಾನ ಮಾಡದಿರಲು ಸಾಧ್ಯವೇ ಎಂಬ ಆಯ್ಕೆಯನ್ನು ಪರಿಗಣಿಸಿ ಎಂದು ಕೋರ್ಟ್ ಕೇಂದ್ರ ಸರಕಾರಕ್ಕೆ ಸಲಹೆ ಕೊಟ್ಟಿದೆ. ಆದರೆ ಸರಕಾರ ಇದನ್ನು ಪರಿಗಣಿಸಿಲ್ಲ.
ಈ ಬಗ್ಗೆ ಬುಧವಾರ ವಿಚಾರಣೆ ಆರಂಭಿ ಸಿದ್ದ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠ ಗುರುವಾರವೂ ವಾದ-ಪ್ರತಿವಾದ ಆಲಿಸಿತು. ಈ ಸಮಸ್ಯೆಯನ್ನು ಬಗೆಹರಿಸಲು ಸಮಿತಿಯೊಂದನ್ನು ರಚಿಸುವ ಬಗ್ಗೆಯೂ ಪ್ರಸ್ತಾವಿಸಿದ ಕೋರ್ಟ್, ಎಲ್ಲ ಪಾರ್ಟಿಗಳು ಒಪ್ಪಿದರಷ್ಟೇ ಸಮಿತಿ ರಚನೆ ಎಂದಿತು.