ಹಿನ್ನೀರಿಂದ ಮುಳುಗಡೆ ಭೀತಿ
ಮ.ಪ್ರ ಹಳ್ಳಿಗೆ ಸರ್ದಾರ್ ಸರೋವರದ ಸಂಕಷ್ಟ
Team Udayavani, Aug 26, 2019, 4:37 AM IST
ಇಂದೋರ್: ಗುಜರಾತ್ನಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟು ಭರ್ತಿಯಾಗಿದ್ದು, ಅದರ ಹಿನ್ನೀರಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿಸಾರ್ಪುರ್ ಎಂಬ ಹಳ್ಳಿಯೊಂದು ಪೂರ್ತಿ ಮುಳುಗಡೆಯಾಗಲಾರಂಭಿಸಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಅಪಾರ ಮಳೆ ಇದಕ್ಕೆ ಕಾರಣ.
ಭಾನುವಾರ, ಅಣೆಕಟ್ಟಿನಲ್ಲಿ 370.7 ಅಡಿಗಳಷ್ಟು ಹಿನ್ನೀರು ಹೆಚ್ಚಳವಾಗಿದ್ದು, ಇದು ಅಪಾಯ ಮಟ್ಟಕ್ಕಿಂತ 21 ಅಡಿಯಷ್ಟು ಎತ್ತರಕ್ಕೇರಿದೆ. ಇದರಿಂದಾಗಿ, ಹಿನ್ನೀರಿನಿಂದ ಸುಮಾರು 180 ಕಿ.ಮೀ ದೂರವಿದ್ದರೂ ನಿಸಾರ್ಪುರ್ ಹಳ್ಳಿಯ ಹೊರವಲಯದಲ್ಲಿರುವ ಮರಗಳು, ಹೊಲಗದ್ದೆಗಳು ಮುಳುಗಿ ಹೋಗಿವೆ. ಒಂದೆಡೆ ಹಿನ್ನೀರಿನಿಂದ ಈ ತಾಪತ್ರಯ ಶುರುವಾಗಿದ್ದರೆ, ಮತ್ತೂಂದೆಡೆ, ನಿಸಾರ್ಪುರ ಹಳ್ಳಿಯ ಬಳಿಯಲ್ಲೇ ಸಾಗುವ ನರ್ಮದಾ ನದಿಯ ಉಪನದಿಯಾದ ‘ಉರಿ ಬಘಿನಿ’ ಎಂಬ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿ ಅದೂ ಸಹ ಹಳ್ಳಿಗೆ ಕಂಟಕವನ್ನು ತಂದೊಡ್ಡಿದೆ. ಇದರಿಂದ, ಹಳ್ಳಿಯ ಮತ್ತೂಂದು ಬದಿಯ ಕೆಲವು ಜನವಸತಿ ಪ್ರಾಂತ್ಯಗಳು ಮುಳುಗಡೆಯಾಗುತ್ತಿವೆ ಎಂದು ಹೇಳಲಾಗಿದೆ. ಸುಮಾರು ಎರಡು ಶತಮಾನಗಳಷ್ಟು ಇತಿಹಾಸವಿರುವ ಈ ಹಳ್ಳಿಯಲ್ಲಿ 10,000 ಜನಸಂಖ್ಯೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ