ಫೆ.4ರ ಬೆಂಗಳೂರು ಬಂದ್ ಸಂವಿಧಾನ ಬಾಹಿರ; ಹೈಕೋರ್ಟ್ ಹೇಳಿದ್ದೇನು
Team Udayavani, Feb 2, 2018, 3:37 PM IST
ಬೆಂಗಳೂರು: ಫೆ.4ರಂದು ಮಹದಾಯಿ ವಿಚಾರವಾಗಿ ಕರೆ ನೀಡಿರುವ ಬೆಂಗಳೂರು ಬಂದ್ ಸಂವಿಧಾನ ಬಾಹಿರ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಬಂದ್ ಮಾಡುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಅಭಿಪ್ರಾಯವ್ಯಕ್ತಪಡಿಸಿದೆ.
ಫೆ.4ರ ಬಂದ್ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಸಿಜೆ ಎಚ್ ಜಿ.ರಮೇಶ್ ಹಾಗೂ ನ್ಯಾ.ಪಿಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಬಂದ್ ಅಂದ್ರೆ ಎಲ್ಲವನ್ನು ನಿಲ್ಲಿಸುವುದು ಎಂದೇ ಅರ್ಥ. ಹೀಗಾಗಿ ಬೇರೆಯವರಿಗೆ ತೊಂದರೆ ನೀಡುವುದು ಮೂಲಭೂತ ಹಕ್ಕಲ್ಲ. ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗಬಾರದು. ಹೀಗಾಗಿ ಬಂದ್ ಗೆ ಕರೆ ನೀಡುವುದು ಸಂವಿಧಾನ ಬಾಹಿರ ಕ್ರಮ. ಸುಪ್ರೀಂಕೋರ್ಟ್ ತೀರ್ಪು ಪಾಲಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.