ಯೋಗಿಯನ್ನು ಅವರ ಪಾದರಕ್ಷೆಯಿಂದಲೇ ಹೊಡೆಯೋಣ ಅನ್ನಿಸಿತು: ಉದ್ಧವ್
Team Udayavani, May 26, 2018, 3:13 PM IST
ಮುಂಬಯಿ : ಪಾಲ್ಘರ್ ಕ್ಷೇತ್ರಕ್ಕೆ ಈಚೆಗೆ ಬಂದಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಾದರಕ್ಷೆ ತೊಟ್ಟುಕೊಂಡೇ ಮರಾಠಾ ದೊರೆ, ಯೋಧ ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುತ್ತಿದ್ದುದನ್ನು ಕಂಡಾಗ ಅವರ ಅದೇ ಪಾದರಕ್ಷೆಯಿಂದ ಅವರ ಮುಖಕ್ಕೆ ಹೊಡೆದು ಬಿಡೋಣ ಎಂದು ಅನ್ನಿಸಿತು ಎಂಬುದಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಬರೆದಿದ್ದಾರೆ.
“ನನ್ನ ಪ್ರಕಾರ ಆದಿತ್ಯನಾಥ್ ಒಬ್ಬ ಯೋಗಿ ಅಲ್ಲ; ಅವರೊಬ್ಬ ಭೋಗಿ. ಅವರು ನಿಜಕ್ಕೂ ಯೋಗಿ ಆಗಿದ್ದಿದ್ದರೆ ಎಲ್ಲವನ್ನೂ ತೊರೆದು ಗುಹೆಯಲ್ಲಿ ಕುಳಿತುಕೊಳ್ಳಬೇಕಿತ್ತು. ಆದರೆ ಅವರು ಹೋಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ’ ಎಂದು ಉದ್ಧವ್ ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ಮಾಜಿ ಮಿತ್ರ ಪಕ್ಷವಾಗಿರುವ ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್, “ಇವತ್ತು ಬಿಜೆಪಿ ತನ್ನ ಎದುರಿಗೆ ಬರುವ ಯಾರನ್ನೇ ಆದರೂ ಇರಿದು ಕೊಲ್ಲುವ ಹುಚ್ಚ ಕೊಲೆಗಡುಕನಂತಾಗಿದೆ’ ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ