ರಸಗೊಬ್ಬರ ದುಬಾರಿ; ತೀವ್ರ ಕೊರತೆ! ಬೆಳೆಗೆ ಸಿದ್ಧವಾಗಿರುವ ರೈತರಿಗೆ ಚಿಂತೆ

ಆಮದಿಗೆ ಕಂಪೆನಿಗಳ ಹಿಂಜರಿಕೆ

Team Udayavani, Apr 16, 2022, 7:15 AM IST

ರಸಗೊಬ್ಬರ ದುಬಾರಿ; ತೀವ್ರ ಕೊರತೆ! ಬೆಳೆಗೆ ಸಿದ್ಧವಾಗಿರುವ ರೈತರಿಗೆ ಚಿಂತೆ

ಹೊಸದಿಲ್ಲಿ: ದೇಶದಲ್ಲಿ ಪ್ರಸಕ್ತ ವರ್ಷದ ಮುಂಗಾರು ಸಾಮಾನ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿರುವುದರಿಂದ ರೈತಾಪಿ ವರ್ಗ ಖುಷಿಯಲ್ಲಿದ್ದರೂ, ಅವರಿಗೆ ರಸಗೊಬ್ಬರದ ಕೊರತೆ ಕಾಡುವ ಆತಂಕ ಎದುರಾಗಿದೆ. ಜತೆಗೆ ಯುದ್ಧದಿಂದಾಗಿ ಅವುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ತಿಂಗಳ ಅಂತ್ಯಕ್ಕೆ ಆಹಾರ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಶೇ.6.95ರ ವರೆಗೆ ಏರಿಕೆ ಯಾಗಿರುವಂತೆಯೇ ಹೊಸ ಸಮಸ್ಯೆ ಎದುರಾಗಿದೆ.

ಕೃಷಿಗೆ ಮುಖ್ಯವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್‌ ಕೊರತೆಯಿದೆ. ಬೆಲೆ ಯೇರಿಕೆ ಆಗಿರುವುದರಿಂದ ಇವನ್ನು ಆಮದು ಮಾಡಿ ಕೊಳ್ಳಲು ಕಂಪೆನಿಗಳು ಹಿಂಜರಿಯುತ್ತಿವೆ. ರೈತರು ಜೂನ್‌ ನಿಂದ ಮುಂಗಾರು ಬೆಳೆ ಬಿತ್ತನೆ ಆರಂಭಿಸುತ್ತಾರೆ.

ಎ.1ರ ಅಂಕಿಸಂಖ್ಯೆ ಗಮನಿಸಿದರೆ 2.5 ದಶಲಕ್ಷ ಟನ್‌ ಡೈ ಅಮೋನಿಯಮ್‌ ಫಾಸ್ಫೇಟ್ (ಡಿಎಪಿ), 0.5 ಮಿಲಿಯನ್‌ ಟನ್‌ ಪೊಟ್ಯಾಶ್‌ (ಎಂಒಪಿ), ಸಾರಜನಕ, ಫಾಸ್ಫರಸ್‌, ಪೊಟ್ಯಾಶ್‌, ಸಲ#ರ್‌ (ಎನ್‌ಪಿಕೆಎಸ್‌) ಮಿಶ್ರವಾಗಿರುವ 1 ಮಿ. ಟನ್‌ಗಳಷ್ಟು ಗೊಬ್ಬರ ಲಭ್ಯವಿದೆ. ಆದರೆ ಇದು ದೇಶದ ಮಟ್ಟಿಗೆ ನೋಡಿದರೆ ಬಹಳ ಕಡಿಮೆ.

ಇದನ್ನೂ ಓದಿ:ಪ್ರತಿ ಇಲಾಖೆಯಲ್ಲೂ 40 ಪರ್ಸೆಂಟ್‌ ಹಾವಳಿ: ತನಿಖೆ ನಡೆಸಿದರೆ ಇನ್ನಿಬ್ಬರ ವಿಕೆಟ್‌ ಬೀಳಲಿದೆ

ಕಾಳಗದ ಪರಿಣಾಮ
ಭಾರತದಲ್ಲಿ ಯೂರಿಯ ಪೂರೈಕೆ ಸ್ಥಿರವಾಗಿರುತ್ತದೆ. ಆದರೆ ಯೂರಿಯವನ್ನು ಹೊರತುಪಡಿಸಿದ ಅನ್ಯ ಗೊಬ್ಬರಗಳ ಬೆಲೆ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಹೆಚ್ಚುತ್ತಲೇ ಇದೆ. ಆಮದನ್ನು ಪರಿಗಣಿಸಿದರೆ ಡಿಎಪಿ 1 ಟನ್‌ಗೆ 95,000 ರೂ., ಎಂಒಪಿ 1 ಟನ್‌ಗೆ 53,200-57,000 ರೂ., ಎನ್‌ಪಿಕೆ 1 ಟನ್‌ಗೆ 59,280 ರೂ. ಬೆಲೆ ಇದೆ. ಜಿಎಸ್‌ಟಿ ಮತ್ತಿತರ ಖರ್ಚುಗಳನ್ನೆಲ್ಲ ಸೇರಿಸಿದರೆ 1 ಟನ್‌ ಡಿಎಪಿ ಆಮದಿಗೆ 1.1 ಲಕ್ಷ ರೂ. ಆಗುತ್ತದೆ. ಒಟ್ಟಾರೆ 1 ಟನ್‌ ಆಮದು ಮಾಡಿಕೊಳ್ಳುವಾಗ ವ್ಯಾಪಾರಿಗೆ ಸರಿಸುಮಾರು 50,000 ರೂ. ನಷ್ಟವಾಗುತ್ತದೆ.

ಅಲ್ಲದೆ, ಸರಕಾರ ಸಹಾಯಧನ (ಸಬ್ಸಿಡಿ)ವನ್ನು ಹೆಚ್ಚಿಸುತ್ತಾ, ಹೆಚ್ಚಿನ ಬೆಲೆಯನ್ನು ನಮೂದಿಸಲು ಅವಕಾಶ ನೀಡುತ್ತಾ ಈ ಎಲ್ಲ ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಹೊಸ ಆಮದು ಒಪ್ಪಂದಗಳೇ ಆಗಿಲ್ಲ. ಇದು ರೈತರ ಪಾಲಿಗೆ ಸಂಕಷ್ಟ ತರುವ ಸಾಧ್ಯತೆಯಿದೆ.

ಸದ್ಯ ರೈತರು ರಬಿ ಅವಧಿಯ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ಕಂಡುಕೊಳ್ಳುವಲ್ಲಿ ವ್ಯಸ್ತರಾಗಿದ್ದಾರೆ.

ಮುಂಗಾರು ಶುರುವಾಗುವುದಕ್ಕಿಂತ ಮೊದಲು ಅವರಿಗೆ ರಸಗೊಬ್ಬರಗಳನ್ನು ಸಂಗ್ರಹಿಸಿ ಇರಿಸಬೇಕಾಗಿದೆ.

ಹೀಗಾಗಿ, ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಸಗೊಬ್ಬರ ಕ್ಷೇತ್ರದ ಪರಿಣಿತರು ಅಭಿಪ್ರಾಯಪಡುತ್ತಾರೆ.

ದೇಶದಲ್ಲಿ ಸಂಗ್ರಹ ಎಷ್ಟಿದೆ?
2.5 ಮಿಲಿಯ ಟನ್‌- ಡಿಎಪಿ
0.5 ಮಿಲಿಯ ಟನ್‌- ಪೊಟ್ಯಾಷ್‌
1 ಮಿಲಿಯ ಟನ್‌- ನೈಟ್ರೋಜನ್‌, ಪಾಸೊ#ರಸ್‌, ಪೊಟ್ಯಾಷ್‌ ಮತ್ತು ಸಲ್ಫರ್ (ಎನ್‌ಪಿಕೆಎಸ್‌)

ದೇಶದಲ್ಲಿ ರಸಗೊಬ್ಬರ ಬಳಕೆ
(ಎಪ್ರಿಲ್‌-ಸೆಪ್ಟೆಂಬರ್‌ ಅವಧಿ)
9 ಮಿಲಿಯ ಟನ್‌- ಡಿಎಪಿ
10 ಮಿಲಿಯ ಟನ್‌-ಎನ್‌ಪಿಕೆಎಸ್‌
4.5- 5 ಮಿಲಿಯ ಟನ್‌- ಪೊಟ್ಯಾಷ್‌
ಶೇ.55- ಅಕ್ಟೋಬರ್‌- ಮಾರ್ಚ್‌ ಅವಧಿಯಲ್ಲಿ

 

 

 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.