ಮಾಜಿ ಪ್ರಧಾನಿ, ಕವಿ ವಾಜಪೇಯಿ ನಿಧನಕ್ಕೆ ಮರುಗಿದ ಬಾಲಿವುಡ್
Team Udayavani, Aug 16, 2018, 6:59 PM IST
ಮುಂಬಯಿ : 93ರ ಹರೆಯದಲ್ಲಿ ಇಂದು ಅಸ್ತಂಗತರಾದ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ಮರುಗಿದೆ.
ಬಾಲಿವುಡ್ ಗಾನ ಕೋಗಿಲೆ ಎಂದೇ ಖ್ಯಾತಿವೆತ್ತಿರುವ ಭಾರತ ರತ್ನ ಲತಾ ಮಂಗೇಶ್ಕರ್ ಅವರು “ನನ್ನ ತಂದೆ ನಿಧನ ಹೊಂದಿದ್ದಾಗ ನನಗೆ ಎಷ್ಟು ನೋವಾಗಿತ್ತೋ ಅಷ್ಟೇ ನೋವು ಈಗ ವಾಜಪೇಯಿ ನಿಧನದಿಂದ ಆಗಿದೆ’ ಎಂದು ದುಃಖೀಸಿದ್ದಾರೆ. ಅಗಲಿದ ವಾಜಪೇಯಿ ಅವರ ಆತ್ಮಕ್ಕೆ ಭಗವಂತನು ಚಿರ ಶಾಂತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ತಮಿಳು ಮೆಗಾಸ್ಟಾರ್ ರಜನಿಕಾಂತ್ ಅವರು ವಾಜಪೇಯಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ನಿಧನದೊಂದಿಗೆ ಒಂದು ಯುಗವೇ ಅಂತ್ಯಗೊಂಡಿತು ಎಂದು ಲೇಖಕ ನಟ ಸುಹೇಲ್ ಸೇಟ್ ಹೇಳಿದ್ದಾರೆ.
‘ವಾಜಪೇಯಿ ಅವರಂತೆ ನಮ್ಮ ಎಲ್ಲ ಹಿರಿಯರು, ನಾಯಕರು ಇರಬೇಕೆಂದು ನಾವು ಸದಾ ಇಷ್ಟಪಡುತ್ತೇವೆ; ಅಂತಹ ಮಹೋನ್ನತ ವ್ಯಕ್ತಿ ತೀರಿಕೊಂಡದ್ದಕ್ಕೆ ದುಃಖವಾಗಿದೆ’ ಎಂದು ಸೋನಾ ಮೋಹಪಾತ್ರ ಹೇಳಿದ್ದಾರೆ.
ಖ್ಯಾತ ಲೇಖಕ ಚೇತನ್ ಭಗತ್, ನಟ ಬೋಮನ್ ಇರಾನಿ, ವಿವೇಕ್ ಆನಂದ್ ಒಬೆರಾಯ್, ಧನುಷ್, ರಣದೀಪ್ ಹೂಡ, ಕೈಲಾಶ್ ಖೇರ್ ಮೊದಲಾದವರು ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ