ಇಂಡೋ-ಟಿಬೆಟಿಯನ್ ಯೋಧನ ಏಕಾಏಕಿ ಗುಂಡಿನ ದಾಳಿಗೆ ಆರು ಮಂದಿ ಯೋಧರ ಸಾವು
Team Udayavani, Dec 4, 2019, 12:51 PM IST
ರಾಯ್ ಪುರ್: ಯೋಧರ ನಡುವೆ ಮಾರಾಮಾರಿ ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ 5 ಮಂದಿ ಇಂಡೋ ಟಿಬೆಟಿಯನ್ ಗಡಿ ಕಾವಲು ಪಡೆ ಯೋಧರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬುಧವಾರ ಚತ್ತೀಸ್ ಗಢದಲ್ಲಿ ನಡೆದಿದೆ.
ಐಟಿಬಿಪಿಯ ಕಾನ್ಸ್ ಟೇಬಲ್ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 5 ಮಂದಿ ಯೋಧರು ಸಾವನ್ನಪ್ಪಿದ್ದು, ಬಳಿಕ ತನಗೆ ತಾನು ಗುಂಡು ಹೊಡೆದುಕೊಂಡ ಯೋಧ ಸಾವಿಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.
ನಾರಾಯಣ್ ಪುರ್ ಪ್ರದೇಶದಲ್ಲಿ ಶಿಬಿರದಲ್ಲಿ ಐಟಿಬಿಪಿ ಜವಾನರ ನಡುವೆ ಜಗಳ ಆರಂಭವಾಗಿತ್ತು. ನಂತರ ಯೋಧರನೊಬ್ಬ ತನ್ನ ಸಹ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವುದಾಗಿ ಚತ್ತೀಸ್ ಗಢ್ ಪೊಲೀಸ್ ಮಹಾನಿರ್ದೇಶಕ ಡಿಎಂ ಅವಾಸ್ಥಿ ತಿಳಿಸಿದ್ದಾರೆ.
ಆದರೆ ಮತ್ತೊಂದು ವರದಿ ಪ್ರಕಾರ, ಗುಂಡಿನ ದಾಳಿಗೆ ಜಗಳವೇ ಕಾರಣ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ರಜೆಯ ವಿಚಾರದಲ್ಲಿ ಯೋಧ ಆಕ್ರೋಶಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!