ವರದಿಗಾರರ ಮೇಲೆ ಗುಂಡಿನ ದಾಳಿ: ಪಾರು
Team Udayavani, Jun 10, 2019, 6:00 AM IST
ಹೊಸದಿಲ್ಲಿ: ಪ್ರಗತಿ ಮೈದಾನದ ಬಳಿ ಕಾರಲ್ಲಿ ತೆರಳುತ್ತಿದ್ದ ಖಾಸಗಿ ವಾಹಿನಿಯ ವರದಿಗಾರರ ಮೇಲೆ ದುಷ್ಕರ್ಮಿ ರವಿವಾರ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವರದಿಗಾರ ಸಿದ್ದಾರ್ಥ್ ಪುರೋಹಿತ್, ಕೆಮೆರಾಮನ್ ಹಾಗೂ ಚಾಲಕ ಚಂದರ್ ಸೇನ್ ಜತೆಗೆ ತೆರಳುತ್ತಿದ್ದಾಗ ಬೆನ್ನತ್ತಿ ಬಂದ ಮುಸುಕುಧಾರಿ ಮೂರು ಗುಂಡು ಚಲಾಯಿಸಿದ್ದಾನೆ.