ಮೀನು ನಿಷೇಧ ತೆರವು ಮಾಡಲ್ಲ: ವಿಶ್ವಜಿತ್ ರಾಣೆ
Team Udayavani, Dec 2, 2018, 6:15 AM IST
ಪಣಜಿ: ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧ ತೆರವುಗೊಳಿಸುವಂತೆ ಕರ್ನಾಟಕ ಸಿಎಂ ಕುಮಾರಸ್ವಾಮಿ, ಗೋವಾ ಮುಖ್ಯಮಂತ್ರಿ ಪರೀಕರ್ಗೆ ಪತ್ರ ಬರೆದಿದ್ದಾರೆ.
ಆದರೆ, ಎಲ್ಲಿಯವರೆಗೆ ಮೀನು ಸಾಗಾಟಗಾರರು ಹಾಗೂ ವ್ಯಾಪಾರಿಗಳು ಎಫ್ಡಿಎ ಸೂಚನೆ ಪಾಲನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧ ತೆರವುಗೊಳಿಸಲಾಗುವುದಿಲ್ಲ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋವಾ ಸರ್ಕಾರವು ಹೊರಡಿಸಿರುವ ಸೂಚನೆ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧವಲ್ಲ. ಇಲ್ಲಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯವರೆಗೆ ಆದೇಶದ ಪಾಲನೆ ಆಗುವುದಿಲ್ಲವೋ ಅಲ್ಲಿಯವರೆಗೆ ನಿಷೇಧ ತೆರವುಗೊಳಿಸಲಾಗುವುದಿಲ್ಲ. ಕರ್ನಾಟಕ ಸಿಎಂ ಕುಮಾರಸ್ವಾಮಿ ಬರೆದ ಪತ್ರ ನಮ್ಮ ಕೈ ಸೇರಿದೆ. ಆದರೆ, ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧವನ್ನು ಮಾತ್ರ ತೆರವುಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್