ಹಕ್ಕು ಚಲಾಯಿಸಿದ್ದಕ್ಕೆ ಐದು ಗುಂಡುಗಳು ದೇಹ ಹೊಕ್ಕವು!
Team Udayavani, May 22, 2019, 6:01 AM IST
ಇದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಘಟನೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಲ್ಲಿನ ಗ್ರಾಮವೊಂದರ ಮತಗಟ್ಟೆಯಲ್ಲಿ ಚಲಾವಣೆ ಯಾದ ಮತಗಳು ಕೇವಲ 7. ಆ ಪೈಕಿ 5 ಮತಗಳು ಪಿಡಿಪಿ ಕಾರ್ಯಕರ್ತ ಮೊಹಮ್ಮದ್ ಜಮಾಲ್ ಅವರ ಕುಟುಂಬ ಸದಸ್ಯರದ್ದು. ಆದರೆ, ತಮ್ಮ ಕುಟುಂಬವನ್ನು ಹಕ್ಕು ಚಲಾಯಿಸಲು ಪ್ರೋತ್ಸಾಹಿಸಿ, ಮತಗಟ್ಟೆಗೆ ಕರೆದೊಯ್ದಿದ್ದಕ್ಕೆ ಜಮಾಲ್ಗೆ ಸಿಕ್ಕ ಪ್ರತಿ ಫಲವೇನು ಗೊತ್ತಾ? ಸಾವು!
ಮತದಾನದ ಮಾರನೇ ದಿನವೇ 5 ಗುಂಡುಗಳು ಜಮಾಲ್ರ ದೇಹವನ್ನು ಹೊಕ್ಕಿವೆ. ಮನೆಯೊಳಗೆ ಕೊಠಡಿಯಲ್ಲಿ ಕುಳಿತಿದ್ದ ಅವರನ್ನು ಕಿಟಕಿಯಾಚೆಯಿಂದ ಬಂದು ಹತ್ಯೆಗೈಯಲಾಗಿದೆ. ಇದು ಕಣಿವೆ ರಾಜ್ಯದ ಉಗ್ರರು ನಡೆಸಿದ ದುಷ್ಕೃತ್ಯ. ಮತದಾನಕ್ಕೆ ಬಹಿಷ್ಕಾರ ಹಾಕುವಂತೆ ಉಗ್ರರು ಕರೆ ನೀಡಿದ್ದರು. ಹೀಗಾಗಿ, ಜಮ್ಮು-ಕಾಶ್ಮೀರದ ಈ ಗ್ರಾಮದಲ್ಲಿನ ಬಹುತೇಕ ಮಂದಿ ಹಕ್ಕು ಚಲಾಯಿಸುವ ಧೈರ್ಯ ತೋರಿರಲಿಲ್ಲ. ಆದರೆ, ಜಮಾಲ್ ಕುಟುಂಬದ ಐವರು ಸದಸ್ಯರು ಮತ್ತು ಇತರೆ ಇಬ್ಬರು ಮಾತ್ರ ಅಂದು ಮತದಾನ ಮಾಡಿದ್ದರು. ಈ ಮಾಹಿತಿ ಪಡೆದ ಉಗ್ರರು, ಜಮಾಲ್ರ ಮನೆಗೆ ನುಗ್ಗಿ ಅವರನ್ನು ಕೊಂದು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?