ಹಂಪನಾ ಸೇರಿ ಐವರಿಗೆ ರಾಷ್ಟ್ರಪತಿ ಪುರಸ್ಕಾರ
Team Udayavani, Aug 16, 2019, 3:04 AM IST
ನವದೆಹಲಿ/ಬೆಂಗಳೂರು: ಕನ್ನಡ ಭಾಷೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಾಹಿತಿ ಡಾ. ಹಂಪ ನಾಗರಾಜಯ್ಯ ಸೇರಿ ಐವರಿಗೆ ರಾಷ್ಟ್ರಪತಿ ಪುರಸ್ಕಾರ ಲಭ್ಯವಾಗಿದೆ. ಸಂಸ್ಕೃತದಲ್ಲಿ ಅಪಾರ ಸೇವೆಗೈದ ಡಾ. ಜನಾರ್ದನ ಹೆಗಡೆ ಅವರಿಗೂ ರಾಷ್ಟ್ರಪತಿಯವರ ಅತ್ಯುನ್ನತ ಪುರಸ್ಕಾರ ಒದಗಿ ಬಂದಿದೆ.
ಅಲ್ಲದೆ, ಮಹರ್ಷಿ ಬಾದರಾಯಣ ವ್ಯಾಸ ಪುರಸ್ಕಾರವನ್ನು ಜಿ.ಬಿ ಹರೀಶ, ಎಂ. ಭೈರಪ್ಪ ಮತ್ತು ಎಸ್.ಕಾರ್ತಿಕ್ ಅವರಿಗೆ ನೀಡಲಾಗಿದೆ. ಸಂಸ್ಕೃತ ಭಾರತಿ ಸಂಸ್ಥೆಯ ಹಿರಿಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಜನಾರ್ದನ ಹೆಗಡೆ ಅವರು ಸಂಭಾಷಣ ಸಂದೇಶಃ ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.