ಆಂಧ್ರ, ತ.ನಾಡಲ್ಲೂ ಫ್ಲೈಟ್ ಹಾರಾಟ ಶುರು ; ಬೆಂಗಳೂರಿನಿಂದ ವಿಜಯವಾಡ ತಲುಪಿದ ಮೊದಲ ವಿಮಾನ
Team Udayavani, May 27, 2020, 9:27 AM IST
ತಮ್ಮ ಕರ್ತವ್ಯಕ್ಕೆ ಹಾಜರಾಗಲು ಸಾಗುತ್ತಿರುವ ಗಗನ ಸಖಿಯರು.
ಹೊಸದಿಲ್ಲಿ: ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಮಂಗಳವಾರ ಕೋವಿಡ್ ಭೀತಿಯ ಹೊರತಾಗಿಯೂ ವಿಮಾನ ಯಾನ ಶುರು ಮಾಡಲಾಗಿದೆ. 79 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಆಂಧ್ರದತ್ತ ಹೊರಟ ಮೊದಲ ವಿಮಾನ ಬೆಳಗ್ಗೆ 6.55ಕ್ಕೆ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಬೆಂಗಳೂರಿನಿಂದ ಹೊರಟಿದ್ದ ಮತ್ತೂಂದು ವಿಮಾನ ಬೆಳಗ್ಗೆ 7 ಗಂಟೆಗೆ ವಿಶಾಖಪಟ್ಟಣ ನಿಲ್ದಾಣ ತಲುಪಿದೆ. ಇನ್ನೊಂದೆಡೆ 68 ಪ್ರಯಾಣಿಕರನ್ನು ಒಳಗೊಂಡ ಸ್ಪೈಸ್ ಜೆಟ್ ವಿಮಾನವು ವಿಜಯವಾಡದಿಂದ ಬೆಂಗಳೂರಿಗೆ ಬಂದಿಳಿದಿದೆ.
ಪ್ರಸ್ತುತ ಆಂಧ್ರದಲ್ಲಿ ಸೇವೆ ಪುನರಾರಂಭಗೊಂಡಿದ್ದು, ವಿಜಯವಾಡ ಮತ್ತು ವಿಶಾಖಪಟ್ಟಣ ಏರ್ಪೋರ್ಟ್ಗಳಿಂದ ಪ್ರತಿ ದಿನ ಹಗಲು ವೇಳೆಯಲ್ಲಿ ತಲಾ ಎಂಟು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿನ ಆತಂಕ: ತಮಿಳುನಾಡಿನಲ್ಲಿ ವಿಮಾನಯಾನ ಶುರುವಾಗಿದೆ. ಆದರೆ ಮೊದಲ ದಿನವೇ ಸೋಂಕಿನ ಆತಂಕ ಉಂಟಾಯಿತು. ಚೆನ್ನೈನಿಂದ ಕೊಯಮತ್ತೂರಿನಿಂದ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಸೋಂಕು ದೃಢಪಟ್ಟಿತು. ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
329 ಭಾರತೀಯರು ವಾಪಸ್: ಕೋವಿಡ್ ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸಿಲುಕಿದ್ದ ಮತ್ತಷ್ಟು ಭಾರತೀಯರು, ವಂದೇ ಭಾರತ್ ಮಿಷನ್ ಅಡಿ ನ್ಯೂಯಾರ್ಕ್ನಿಂದ ಬಂದ ಏರ್ ಇಂಡಿಯಾದ ನಾಲ್ಕನೇ ವಿಶೇಷ ವಿಮಾನದಲ್ಲಿ ದೇಶಕ್ಕೆ ಮರಳಿದ್ದಾರೆ. ಇಬ್ಬರು ಶಿಶುಗಳು ಸೇರಿ 329 ಜನರಿದ್ದ ವಿಮಾನ ಜೆಎಫ್ಕೆ ವಿಮಾನ ನಿಲ್ದಾಣದಿಂದ ಬೆಂಗಳೂರು ತಲುಪಿದ್ದಾರೆ. ಇಸ್ರೇಲ್ನಲ್ಲಿದ್ದ 115 ಭಾರತೀಯರು ಮಂಗಳವಾರ ದಿಲ್ಲಿ ತಲುಪಿದ್ದಾರೆ.
608 ಹಾರಾಟ: ಮಂಗಳವಾರ ಸಂಜೆ 5 ರವರೆಗೆ ದೇಶದ ಏರ್ಪೋರ್ಟ್ಗಳಲ್ಲಿ 325 ಟೇಕಾಫ್, 283 ಲ್ಯಾಂಡಿಂಗ್ ಆಗಿವೆ. 41,673 ಮಂದಿ ಪ್ರಯಾಣಿಸಿದ್ದಾರೆ ಎಂದು ಸಚಿವ ಹರ್ದೀಪ್ಸಿಂಗ್ ಪುರಿ ತಿಳಿಸಿದ್ದಾರೆ. ಎರಡನೇ ದಿನ ಕೂಡ ಹಲವಾರು ವಿಮಾನಗಳು ರದ್ದಾಗಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
MUST WATCH
ಹೊಸ ಸೇರ್ಪಡೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್