ಬಡತನ ತಿಳಿಯದವರಿಗೆ ಅದೊಂದು ಮನೋಸ್ಥಿತಿ: ಪ್ರಧಾನಿ ಮೋದಿ
Team Udayavani, Mar 5, 2019, 10:43 AM IST
ಅಹ್ಮದಾಬಾದ್ : ‘ಹಸಿವಿನಿಂದ ಮಲಗಿ ಅಭ್ಯಾಸ ಇಲ್ಲದವರಿಗೆ ಬಡತನ ಅನ್ನುವುದು ಕೇವಲ ಮನೋಸ್ಥಿತಿಯಾಗಿರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿ ಇರಿಸಿ ಹೇಳಿದರು.
‘ಕೆಲವರಿಗೆ ಬಡತನ ಎನ್ನುವುದು ಕೇವಲ ಬಡವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಷ್ಟೇ ಆಗಿದೆ’ ಎಂದು ಮೋದಿ ಹೇಳಿದರು. ಅವರು ಗುಜರಾತ್ನ ವಸ್ತ್ರಾಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಿಗೆ 3,000 ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಶ್ರಮಯೋಗಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
‘ಬಡವರ ಹೆಸರಲ್ಲಿ ಓಟ್ ಪಡೆದು ದೇಶವನ್ನು 55 ವರ್ಷ ಆಳಿದವರು ಗರೀಬೀ ಹಠಾವೋ ಮೊದಲಾದ ಘೋಷಣೆಗಳೊಂದಿಗೆ ಕಾರ್ಮಿಕರ ಉದ್ದಾರಕರು ತಾವೆಂದು ಹೇಳಿಕೊಂಡವರು ನಿಜಕ್ಕಾದರೆ ಬಡವರಿಗಾಗಿ, ಕಾರ್ಮಿಕರಿಗಾಗಿ ಏನನ್ನೂ ಮಾಡಿಲ್ಲ ಎಂದು ಮೋದಿ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ