ಕಾಳ್ಗಿಚ್ಚಿನಿಂದ ನೆಲಬಾಂಬ್ಗಳ ಸ್ಫೋಟ : ಧರಮ್ಶಾಲಾದಲ್ಲಿ ನಡೆದ ಘಟನೆ
Team Udayavani, May 18, 2022, 11:59 PM IST
ಜಮ್ಮು: ಭಾರತ ಮತ್ತು ಪಾಕಿಸ್ಥಾನ ನಡುವಿನ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಬಳಿಯಲ್ಲಿರುವ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು, ಪೂಂಛ್ ಜಿಲ್ಲೆಯ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿ, ಆ ವಲಯದಲ್ಲಿ ಹುದುಗಿಸಲಾಗಿದ್ದ ನೆಲಬಾಂಬ್ಗಳ ಸ್ಫೋಟಕ್ಕೂ ಕಾರಣವಾಗಿದೆ.
ಸೋಮವಾರದಂದು, ಎಲ್ಒಸಿ ಬಳಿಯ ಮೆಂಧಾರ್ ಸೆಕ್ಟರ್ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು, ನಿಧಾನವಾಗಿ ಮೆಂಧಾರ್ ಸೆಕ್ಟರ್ನಲ್ಲಿರುವ ಅರಣ್ಯಕ್ಕೂ ವ್ಯಾಪಿಸಿತು. ಸೇನೆಯ ಕಾರ್ಯಾಚರಣೆಯಿಂದ ಬುಧವಾರದಂದು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೂ ಬೆಂಕಿಯ ಉಷ್ಣತೆಯಿಂದಾಗಿ ಧರಮ್ಶಾಲಾ ಬ್ಲಾಕ್ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ನುಸುಳುಕೋರರ ಬೇಟೆಗಾಗಿ ನೆಲದಲ್ಲಿ ಹುದುಗಿಸಲಾಗಿದ್ದ ಸುಮಾರು 6 ನೆಲಬಾಂಬ್ಗಳು ಸ್ಫೋಟಗೊಂಡಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೆರಡು ಕಡೆ ಕಾಳ್ಗಿಚ್ಚು: ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ರಜೌರಿ ಜಿಲ್ಲೆಯ ಸುಂದರ್ಬಂಡಿ ಪ್ರಾಂತ್ಯದಲ್ಲಿನ ಗಂಭೀರ್, ನಿಕ್ಕಾ, ಪಂಜಗ್ರಾಯೆ, ಬ್ರಹಾಮನ, ಮೊಘಾಲಾ ಎಂಬ ಸ್ಥಳಗಳಲ್ಲಿನ ಅರಣ್ಯ ಪ್ರದೇಶದಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದಲ್ಲದೆ, ಕಾಲೋಕೋಟೆಯ ಕಲಾರ್, ರಂಥಲ್, ಚಿನ್ನಿ ಅರಣ್ಯ ಪ್ರದೇಶಗಳಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ನೌಕಾ ನಿಗ್ರಹ ಕ್ಷಿಪಣಿಯ ಚೊಚ್ಚಲ ಪರೀಕ್ಷೆ ಯಶಸ್ವಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಪ್ರೀಂನಲ್ಲೂ ಉದ್ಧವ್ ಗೆ ಮುಖಭಂಗ : ನಾಳೆಯೇ ಬಹುಮತ ಸಾಬೀತಿಗೆ ಸುಪ್ರೀಂ ಮಹತ್ವದ ಆದೇಶ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್
ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ
ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್
MUST WATCH
ಹೊಸ ಸೇರ್ಪಡೆ
ಸುಪ್ರೀಂನಲ್ಲೂ ಉದ್ಧವ್ ಗೆ ಮುಖಭಂಗ : ನಾಳೆಯೇ ಬಹುಮತ ಸಾಬೀತಿಗೆ ಸುಪ್ರೀಂ ಮಹತ್ವದ ಆದೇಶ
ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ