ಕಳ್ಳಗಿವಿ ಬಗ್ಗೆ ತನಿಖೆ ನಡೆಸಿ: ಫಡ್ನವೀಸ್
Team Udayavani, Jan 25, 2020, 1:33 AM IST
ಮುಂಬಯಿ: ಫೋನ್ ಕದ್ದಾಲಿಕೆ ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಯಲ್ಲ. ತಮ್ಮ ಅವಧಿಯಲ್ಲಿ ಫೋನ್ ಟ್ರ್ಯಾಪಿಂಗ್ಗೆ ಆದೇಶ ನೀಡಿರಲಿಲ್ಲ. ಬೇಕಿದ್ದರೆ ಈಗಿನ ಶಿವಸೇನೆ ನೇತೃತ್ವದ ಸರಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ವಿಪಕ್ಷನಾಯಕ ದೇವೇಂದ್ರ ಫಡ್ನವೀಸ್ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಚುನಾವಣೆ ವೇಳೆ ಹಿಂದಿನ ಬಿಜೆಪಿ – ಶಿವಸೇನೆ ಸರಕಾರ ವಿಪಕ್ಷಗಳ ನಾಯಕರ ಫೋನ್ ಕದ್ದಾಲಿಸಿತ್ತು ಎಂಬ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.