ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ ನಿಧನ
Team Udayavani, Jun 9, 2020, 1:06 PM IST
ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ ಅವರು ಸೋಮವಾರ ಭುವನೇಶ್ವರದಲ್ಲಿ ಕೊನೆಯುಸಿರೆಳಿದಿದ್ದಾರೆ.
79 ವರ್ಷ ಪ್ರಾಯದ ಅರ್ಜುನ್ ಚರಣ್ ಸೇಥಿ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಭದ್ರಕ್ ಲೋಕಸಭಾ ಕ್ಷೇತ್ರದಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸೇಥಿಯವರು 2000 ಇಸವಿಯಿಂದ 2004ರವರೆಗೆ ಸಚಿವರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತನಾಗಿ ಪ್ರಸಿದ್ಧನಾಗಿದ್ದ ಅರ್ಜುನ್ ಸೇಥಿಯವರು ಒಡಿಶಾ ವಿಧಾನಸಭೆಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಒಡಿಶಾ ಮುಖ್ಯಮಂತ್ರಿ ಅವರು ಅರ್ಜುನ್ ಚರಣ್ ಸೇಥಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.