ಬಸ್ ನಿಲ್ದಾಣದ ಕಾಂಕ್ರೀಟ್ ಸೂರು ಕುಸಿದು ನಾಲ್ವರ ಸಾವು
Team Udayavani, Sep 7, 2017, 5:42 PM IST
ಕೊಯಮುತ್ತೂರು : ಕೊಯಮುತ್ತೂರಿನ ಸೋಮನೂರು ಬಸ್ ನಿಲ್ದಾಣದ ಕಾಂಕ್ರೀಟ್ ಕುಸಿದು ಬಿದ್ದ ಕಾರಣ ಅದರಡಿ ನಿಂತಿದ್ದ ನಾಲ್ಕು ಮೃತ ಮಂದಿ ಮೃತಪಟ್ಟ ಇತರ ಏಳು ಮಂದಿ ಗಾಯಗೊಂಡ ಘಟನೆ ಇಂದು ಗುರುವಾರ ನಡೆದಿರುವುದಾಗಿ ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು 100 ಅಡಿ ಉದ್ದ ಕಾಂಕ್ರೀಟ್ ಸೂರನ್ನು ಮುಖ್ಯ ಕಟ್ಟಡದಿಂದ 15 ಅಡಿ ದೂರದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಲಾಗಿತ್ತು.
ಸೂರು ಕುಸಿದು ಬಿದ್ದ ಪರಿಣಾಮವಾಗಿ ಸೂರಿನಡಿ ನಿಂತಿದ್ದವರ ಪೈಕಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಅಸುನೀಗಿದರು. ಇತರ ಏಳು ಮಂದಿ ಗಾಯಗೊಂಡರು.
ಕಳೆದೆರಡು ದಿನಗಳಿಂದ ಕೊಯಮುತ್ತೂರಿನಲ್ಲಿ ಜಡಿ ಮಳೆಯಾಗುತ್ತಿದ್ದು ಇದರ ಪರಿಣಾಮವಾಗಿ ಕಾಂಕ್ರೀಟ್ ಸೂರು ದುರ್ಬಲಗೊಂಡು ಕುಸಿದಿರಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ