ರೋಪ್ವೇ ತೊಟ್ಟಿಲಲ್ಲಿ ಸಿಲುಕಿದ ನಾಲ್ಕು ಮಕ್ಕಳು ದೀರ್ಘ ಕಾರ್ಯಾಚರಣೆಯಲ್ಲಿ ಪಾರು
Team Udayavani, Jun 19, 2019, 5:01 PM IST
ಸಾಂದರ್ಭಿಕ ಚಿತ್ರ
ಉಧಾಂಪುರ, ಜಮ್ಮು ಕಾಶ್ಮೀರ : ತಾವೀ ನದಿಯ ಮೇಲಿನ ರೋಪ್ವೇ ತೊಟ್ಟಿಲಲ್ಲಿ ಸಿಲುಕಿಕೊಂಡಿದ್ದ ಮೂವರು ಬಾಲಕಿಯರ ಸಹಿತ ನಾಲ್ವರು ಮಕ್ಕಳನ್ನು ಮೂರು ತಾಸುಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಪಾರುಗೊಳಿಸಲಾದ ಘಟನೆ ವರದಿಯಾಗಿದೆ.
ಉಧಾಂಪುರದಿಂದ 33 ಕಿ.ಮೀ ದೂರದ ಪಟ್ಟನಗಢ ಗ್ರಾಮದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ರಭಸದಿಂದ ಹರಿಯುತ್ತಿದ್ದ ತಾವೀ ನದಿ ಮೇಲಿನ ರೋಪ್ವೇ ತೊಟ್ಟಿಲಲ್ಲಿ ನಡು ಮಾರ್ಗದಲ್ಲಿ ಸಿಲುಕಿಕೊಂಡಿದ್ದರು.
ಮಕ್ಕಳು ಕುಳಿತಿದ್ದ ರೋಪ್ ವೇ ತೊಟ್ಟಿಲು ಅರ್ಧ ಮಾರ್ಗದಲ್ಲಿ ಸಾಗುತ್ತಿದ್ದಂತೆಯೇ ತಾಂತ್ರಿಕ ದೋಷ ಕಂಡು ಬಂದ ಕಾರಣ ಮಕ್ಕಳು ತಾಸುಗಟ್ಟಲೆ ಸಿಲುಕಿಕೊಂಡಿದ್ದರು.
ಸುದ್ದಿ ತಿಳಿದ ಹಿರಿಯ ಪೌರ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಮೂರು ತಾಸುಗಳ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ಪಾರುಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು