8.71 ಕೋಟಿ ರೂ. ವಂಚನೆ: ಇಬ್ಬರ ಬಂಧನ
Team Udayavani, Oct 6, 2021, 9:30 PM IST
ಮುಂಬಯಿ: ಅಸಲಿನೊಂದಿಗೆ ಲಾಭ ಕೊಡುವುದಾಗಿ ಹೇಳಿ ಜನರಿಗೆ 8.71 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ವಸಾಯಿ ನಗರದಲ್ಲಿ ಅಮಿತ್ ಕಂಟಿಲಾಲ್ ಜೈನ್ ಮತ್ತು ಯೋಗೇಶ್ ಭಲೆರಾವ್ ಸಣ್ಣದೊಂದು ಕನ್ಸಲ್ಟೆನ್ಸಿ ಕಚೇರಿ ಮಾಡಿಕೊಂಡು ಅದರಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹೂಡಿಕೆಗೆ ಶೇ. 25ರಿಂದ ಶೇ. 50 ಲಾಭ ಕೊಡುತ್ತೇವೆ ಎಂದು ನಂಬಿಸಿದ್ದಾರೆ. 215 ಮಂದಿ 8.17 ಕೋಟಿ ರೂಪಾಯಿ ಹೂಡಿಕೆ ಮಾಡಿದ ಬಳಿಕ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ದುಬಾೖಗೆ ಪರಾರಿಯಾಗಿದ್ದ ಭೋಗೇಶ್ ಇತ್ತೀಚೆಗೆ ಗುಜರಾತ್ನ ಅಂಬರ್ಗಾಂವ್ಗೆ ಬಂದು ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಹಾಗೆಯೇ ಚಿಂಚೋಟಿ ಪ್ರದೇಶದಲ್ಲಿ ಅಡಗಿದ್ದ ಅಮಿತ್ನನ್ನೂ ಬಂಧಿಸಲಾಗಿದೆ. ಅವರು ಇತ್ತೀಚೆಗೆ ಖರೀದಿಸಿದ್ದ 70 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್