ನವೆಂಬರ್ವರೆಗೆ ಉಚಿತ ಪಡಿತರ
Team Udayavani, Jun 24, 2021, 7:13 AM IST
ಹೊಸದಿಲ್ಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅನ್ವಯ ದೇಶದ ಕಡು ಬಡವರಿಗೆ ನೀಡುವ ಉಚಿತ ಪಡಿತರ ವ್ಯವಸ್ಥೆಯನ್ನು ಇನ್ನೂ ಐದು ತಿಂಗಳ ಕಾಲ ಮುಂದುವರಿಸಲಾಗುತ್ತದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ.
ಇದರಿಂದಾಗಿ ದೇಶದ 80 ಕೋಟಿ ಕಡು ಬಡವರಿಗೆ ನವೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳು ಲಭಿಸಲಿವೆ. ಸದ್ಯದ ವ್ಯವಸ್ಥೆ ಪ್ರಕಾರ ಮಾಸಾಂತ್ಯದ ವರೆಗೆ ಪಡಿತರ ವ್ಯವಸ್ಥೆ ಮೂಲಕ ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಮಾತನಾಡಿದ್ದ ವೇಳೆ, ದೀಪಾವಳಿ ವರೆಗೆ ಉಚಿತ ಆಹಾರಧಾನ್ಯವನ್ನು ವಿತರಿಸುವ ಬಗ್ಗೆ ಘೋಷಣೆ ಮಾಡಿದ್ದರು. ಅದನ್ನೇ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.