ಕಾಶ್ಮೀರಿಗರ ಸ್ವಾತಂತ್ರ್ಯಹರಣ: ಚಿದಂಬರಂ
Team Udayavani, Dec 7, 2019, 10:31 PM IST
ಚೆನ್ನೈ: ಜಮ್ಮು-ಕಾಶ್ಮೀರದ 75 ಲಕ್ಷ ಜನರಿಗೆ ಸ್ವಾತಂತ್ರ್ಯ ನಿರಾಕರಿಸಲಾಗಿದೆ. ಕೇಂದ್ರ ಸರ್ಕಾರ ಹಿಮ್ಮುಖವಾಗಿ ಸಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.
ಐಎನ್ಎಕ್ಸ್ ಮಾಧ್ಯಮ ಹಗರಣದಲ್ಲಿ 106 ದಿನಗಳ ಕಾಲ ಜೈಲಲ್ಲಿದ್ದು ಜಾಮೀನಿನಲ್ಲಿ ಹೊರಗೆ ಬಂದಿರುವ ಅವರು, ಈಗ ನಾನು ಸ್ವತಂತ್ರವಾಗಿ ಉಸಿರಾಡುತ್ತಿದ್ದೇನೆ. ಆದರೆ ದೇಶದ ಎಷ್ಟೋ ಜನಕ್ಕೆ ಈ ಅವಕಾಶವಿಲ್ಲ. ಹಲವು ಭಾಗಗಳಲ್ಲಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ, ಅವರ ದನಿಯನ್ನು ಹತ್ತಿಕ್ಕಲಾಗಿದೆ. ಇದನ್ನು ಯಾರೂ ಮರೆಯುವಂತಿಲ್ಲ. ದೇಶದ ಎಲ್ಲಾ ಕಡೆ ತಮಿಳುನಾಡು ಮಾದರಿಯಲ್ಲಿ ಬಿಜೆಪಿಯನ್ನು ದೂರವಿಟ್ಟಾಗ ಮಾತ್ರ ದೇಶಕ್ಕೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಸಿಗುತ್ತದೆ ಎಂದಿದ್ದಾರೆ.