ಭಾರತಕ್ಕೆ ಸಂಪೂರ್ಣ ಬೆಂಬಲ : ಉಗ್ರರ ವಿರುದ್ಧದ ಹೋರಾಟಕ್ಕೆ ಸಾಥ್
Team Udayavani, Oct 31, 2019, 5:55 AM IST
ಶ್ರೀನಗರ: “ಸಂವಿಧಾನದ 370ನೇ ವಿಧಿ ಭಾರತದ ಆಂತರಿಕ ವಿಚಾರವಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ.’
ಹೀಗೆಂದು ಹೇಳಿರುವುದು ಮಂಗಳವಾರವಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಐರೋಪ್ಯ ಒಕ್ಕೂಟದ 23 ಸಂಸದರ ನಿಯೋಗ. ತಮ್ಮ ಭೇಟಿ ಮುಗಿಸಿ ಬುಧವಾರ ಯುರೋಪ್ಗೆ ವಾಪಸಾಗುವ ಮುನ್ನ ನಿಯೋಗದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ್ದಾರೆ. ಈ ಭೇಟಿಯು ನಮ್ಮ ಕಣ್ತೆರೆಸಿತು. ಇಲ್ಲಿ ನಮಗೆ ಕಾಣಿಸಿದ್ದನ್ನು ನಾವು ನಮ್ಮ ದೇಶಕ್ಕೆ ಹೋಗಿ ಹೇಳುತ್ತೇವೆ ಎಂದಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆಯನ್ನೂ ಖಂಡಿಸಿದ್ದಾರೆ.
“370ನೇ ವಿಧಿ ಬಗ್ಗೆ ನಾವು ಮಾತನಾಡುವುದಿಲ್ಲ. ಏಕೆಂದರೆ ಅದು ಭಾರತದ ಆಂತರಿಕ ವಿಚಾರ. ಆದರೆ, ಜಾಗತಿಕ ಸವಾಲಾಗಿರುವ ಭಯೋತ್ಪಾದನೆ ಬಗ್ಗೆ ನಮಗೆ ಕಳವಳವಿದೆ. ಇದರ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಬೆನ್ನಿಗೆ ನಿಲ್ಲಬೇಕು. ಉಗ್ರರು ಒಂದಿಡೀ ದೇಶವನ್ನೇ ನಾಶ ಮಾಡಬಲ್ಲರು. ನಾವು ಅಫ್ಘಾನಿಸ್ಥಾನ, ಸಿರಿಯಾಗೆ ಭೇಟಿ ನೀಡಿದ್ದೇವೆ. ಅಲ್ಲಿ ಉಗ್ರರು ಏನೇನು ಮಾಡಿದ್ದಾರೆ ಎಂಬುದನ್ನೂ ನೋಡಿದ್ದೇವೆ’ ಎಂದು ಸಂಸದರು ಹೇಳಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಪಕ್ಷಪಾತೀಯವಾಗಿ ಸುದ್ದಿ ಮಾಡುತ್ತಿವೆ. ನಾವು ನಮ್ಮ ದೇಶಕ್ಕೆ ವಾಪಸಾದ ಮೇಲೆ ಇಲ್ಲೇನು ನೋಡಿದೆವೋ ಅದನ್ನು ಹೇಳುತ್ತೇವೆ ಎಂದು ಸಂಸದ ರಿಝಾರ್ಡ್ ಝರ್ನೆಕಿ ತಿಳಿಸಿದ್ದಾರೆ.
ನಾಗರಿಕ ಸಾವು: ಬುಧವಾರ ರಜೌರಿ ಜಿಲ್ಲೆಯ ಎಲ್ಒಸಿಯಲ್ಲಿ ಸೇನೆಯ ಮುಂಚೂಣಿ ನೆಲೆಗಳು ಹಾಗೂ ಗಡಿಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಪಡೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ.
ಕಾರ್ಮಿಕರ ಹತ್ಯೆಗೆ ಖಂಡನೆ
ಕುಲ್ಗಾಂನಲ್ಲಿ ಪ.ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದೆ. ಜತೆಗೆ ಕಾರ್ಮಿಕರ ಹತ್ಯೆ ಘಟನೆಗೆ ಕಾಂಗ್ರೆಸ್, ಎನ್ಸಿ, ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಖಂಡನೆ ವ್ಯಕ್ತಪಡಿಸಿವೆ. ಆಘಾತ ವ್ಯಕ್ತಪಡಿಸಿರುವ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು, ಕಾಶ್ಮೀರೇತರರಾದ ಕಾರಣ ಕೂಡಲೇ ರಾಜ್ಯ ಬಿಟ್ಟು ತೆರಳಿ ಎಂದು ಕಾರ್ಮಿಕರಿಗೆ ಉಗ್ರರು ಪದೇ ಪದೆ ಬೆದರಿಕೆ ಹಾಕುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಭಾರತವನ್ನು ಬೆಂಬಲಿಸಿದರೆ ಕ್ಷಿಪಣಿ ದಾಳಿ: ಪಾಕ್
ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಯಾವುದಾ ದರೂ ದೇಶವು ಬೆಂಬಲಿಸಿದ್ದೇ ಆದಲ್ಲಿ, ಆ ದೇಶದ ಮೇಲೆ ಪಾಕಿಸ್ಥಾನವು ಕ್ಷಿಪಣಿ ದಾಳಿ ನಡೆಸಲಿದೆ ಎಂದು ಹೇಳುವ ಮೂಲಕ ಪಾಕ್ ಸಚಿವರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಭಾರತ ದೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಂಡು, ಯುದ್ಧದ ಸನ್ನಿವೇಶ ನಿರ್ಮಾಣವಾದರೆ, ಕಾಶ್ಮೀರ ವಿಚಾರ ದಲ್ಲಿ ಯಾವ ದೇಶ ಭಾರತಕ್ಕೆ ಬೆಂಬಲ ಸೂಚಿಸು ತ್ತದೋ ಆ ದೇಶವನ್ನು ನಮ್ಮ ಶತ್ರು ಎಂದು ಪರಿಗಣಿಸುತ್ತೇವೆ. ಅಲ್ಲದೆ, ಭಾರತ ಹಾಗೂ ಅಂಥ ದೇಶಗಳನ್ನು ಗುರಿಯಾ ಗಿಸಿ ಕೊಂಡು ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದು ಕಾಶ್ಮೀರ ಮತ್ತು ಗಿಲಿYಟ್ ಬಾಲ್ಟಿಸ್ಥಾನದ ವ್ಯವಹಾರ ಗಳ ಸಚಿವ ಅಲಿ ಅಮಿನ್ ಗಂದಾಪುರ್ ಬೆದರಿಕೆ ಹಾಕಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದಕ್ಕೆ ಜವಾಹರಲಾಲ್ ನೆಹರೂರನ್ನು ಈಗಲೂ ಟೀಕಿಸುವ ಬಿಜೆಪಿ, ಈಗ ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಗೆ ಅವಕಾಶ ಕೊಟ್ಟಿದ್ದೇಕೆ?
ಶಿವಸೇನೆ, ಮುಖವಾಣಿ ಸಾಮ್ನಾದಲ್ಲಿ
ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಯು ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಾಜತಾಂತ್ರಿಕ ಬ್ಲಿಂಡರ್. ಕಾಶ್ಮೀರ ನಮ್ಮ ಆಂತರಿಕ ವಿಷಯವಾಗಿದ್ದರೂ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಅದನ್ನು ಅಂತಾರಾಷ್ಟ್ರೀಕರಣಗೊಳಿಸಿತು.
– ರಣದೀಪ್ ಸುಜೇìವಾಲಾ, ಕಾಂಗ್ರೆಸ್ ವಕ್ತಾರ
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವೇನಿದೆ? ಅದು ಎಂದಿದ್ದರೂ ನಮ್ಮದೇ. ಸದ್ಯದಲ್ಲೇ ಪಿಒಕೆ ಭಾರತ ಸರಕಾರದ ನಿಯಂತ್ರಣಕ್ಕೆ ಬರಲಿದೆ.
– ಜ| ವಿ.ಕೆ. ಸಿಂಗ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…