
ಗ್ಯಾಜೆಟ್ ನಿಮಗಿಂತ ಸ್ಮಾರ್ಟ್ ಅಲ್ಲ: ಪ್ರಧಾನಿ ಮೋದಿ
ಪರೀಕ್ಷಾ ಪೇ ಚರ್ಚೆ
Team Udayavani, Jan 28, 2023, 6:25 AM IST

ಹೊಸದಿಲ್ಲಿ: ಯಾವುದೇ ಕಾರಣಕ್ಕೂ ಅಡ್ಡದಾರಿ ಹಿಡಿಯಬೇಡಿ. ಪರೀಕ್ಷೆಯಲ್ಲಿ ನಕಲು ಮಾಡುವುದರಿಂದ ಉತ್ತೀರ್ಣರಾಗಬಹುದಷ್ಟೇ. ದೀರ್ಘಾವಧಿಯಲ್ಲಿ ಇದರಿಂದ ಪ್ರಯೋಜನವಾಗದು. ಅತಿಯಾದ ಗ್ಯಾಜೆಟ್ ಬಳಕೆ ಒಳ್ಳೆಯದಲ್ಲ…
– ಇವು ಪ್ರಧಾನಿ ಮೋದಿ ಆರನೇ ಆವೃತ್ತಿಯ “ಪರೀಕ್ಷಾ ಪೇ ಚರ್ಚೆ’ಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತುಗಳು. ಶುಕ್ರವಾರ ನಡೆದ ಈ ಸಂವಾದದಲ್ಲಿ 38 ಲಕ್ಷ ಮಕ್ಕಳು ಭಾಗಿಯಾಗಿದ್ದರು.
ನಿಮ್ಮ ಸ್ಮಾರ್ಟ್ನೆಸ್ ಬಗ್ಗೆ ನಂಬಿಕೆ ಇಡಿ, ಡಿಜಿಟಲ್ ಗ್ಯಾಜೆಟ್ಗಳ ಮೇಲಲ್ಲ. ಆನ್ಲೈನ್ ಗೇಮ್ಗಳು, ಸಾಮಾಜಿಕ ಮಾಧ್ಯಮಗಳ ಗೀಳು ಒಳ್ಳೆಯದಲ್ಲ. ಇದು ನಿಮ್ಮ ಪರೀಕ್ಷಾ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದರು.
ಪ್ರತೀ ಮನೆಯಲ್ಲಿ “ಟೆಕ್ನಾಲಜಿ ಫ್ರೀ ಝೋನ್’ ಎಂಬುದು ಇರಲಿ. ಇದರಿಂದ ಮಕ್ಕಳಲ್ಲಿ ಉಲ್ಲಾಸಭರಿತ ಜೀವನ ತರಲು ಮತ್ತು ಗ್ಯಾಜೆಟ್ಗಳಿಗೆ ದಾಸರಾಗಿರುವ ಮಕ್ಕಳನ್ನು ಅದರ ಹಿಡಿತದಿಂದ ಹೊರತರಲು ಸಾಧ್ಯವಿದೆ ಎಂಬ ಸಲಹೆಯನ್ನು ಮೋದಿ ನೀಡಿದರು.
ಮೋದಿ ಕಿವಿಮಾತುಗಳು
01ಪೋಷಕರು ಸಾಮಾಜಿಕ ಅಂತಸ್ತಿನ ವಿಚಾರವಾಗಿ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ.
02 ಸತತ ಪರಿಶ್ರಮದ ಮೇಲೆಯೇ ನಂಬಿಕೆ ಇಡಿ, ತಾತ್ಕಾಲಿಕ ಯಶಸ್ಸನ್ನು ನಂಬಲು ಹೋಗಬೇಡಿ.
03 ಜೀವನದುದ್ದಕ್ಕೂ ಪರೀಕ್ಷೆಗಳು ಬರುತ್ತಲೇ ಇರುತ್ತವೆ. ಎಲ್ಲ ಪರೀಕ್ಷೆಗಳಲ್ಲೂ ನಕಲು ಮಾಡಲು ಸಾಧ್ಯವಿಲ್ಲ.
04 ನನ್ನ ಸಂಪುಟವನ್ನು “ಸುಮಾರು’ ಎನ್ನಲಾಗುತ್ತಿತ್ತು. ಆದರೆ ಇದೇ “ಆ್ಯವರೇಜ್’ ಮಂದಿ ಜಗತ್ತಿನಲ್ಲೇ ಭಾರತವನ್ನು ಮಿಂಚುವಂತೆ ಮಾಡಿದ್ದಾರೆ.
05 ಪರೀಕ್ಷೆಗಳು ಜೀವನದ ಅಂತಿಮವಲ್ಲ. ಮನೆಯ ಮಂದಿ ಮಕ್ಕಳ ಮೇಲೆ ಸಾಮಾಜಿಕ ಅಂತಸ್ತಿನ ಮೇಲೆ ಗಮನ ಹರಿಸಬಾರದು.
06 ಪೋಷಕರು ತಮ್ಮನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೆಚ್ಚು ಹೇರಲು ಹೋಗಬೇಡಿ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಸಿ.
07 ಇಂದು ಮಕ್ಕಳಲ್ಲಿ ಒತ್ತಡದ ಪ್ರಮಾಣ ಹೆಚ್ಚಾ ಗುತ್ತಿರುವುದಕ್ಕೆ ಈ ಅಂಶ ಕಾರಣ.
08. 10 ಮತ್ತು 12ನೇ ತರಗತಿ ಪರೀಕ್ಷೆ ಅನಂತರ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಿ. ಅವರಿಂದ ಪ್ರವಾಸದ ಅನುಭವ ಬರೆಸಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

ಕಣ್ಣೂರು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: CCTVಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ