ಗಜ ಮಾರುತ: ಮೃತರ ಸಂಖ್ಯೆ 33ಕ್ಕೇರಿಕೆ
Team Udayavani, Nov 18, 2018, 6:00 AM IST
ಚೆನ್ನೈ: ತಮಿಳುನಾಡಿನ ನಾಗಪಟ್ಟಣಕ್ಕೆ ಗುರುವಾರ ರಾತ್ರಿ ಅಪ್ಪಳಿಸಿದ ಗಜ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 33ಕ್ಕೇರಿಕೆಯಾಗಿದೆ. ಗಜ ಮಾರುತದ ಅಬ್ಬರಕ್ಕೆ 30 ಸಾವಿರ ವಿದ್ಯುತ್ ಕಂಬಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಸಿಎಂ ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಸಂತ್ರಸ್ತರಿಗೆ ನೀಡಿದ ಆಹಾರ ಪೊಟ್ಟಣಗಳ ಮೇಲೆ ನಟ ರಜನೀಕಾಂತ್ರ ಫೋಟೋ ಮುದ್ರಿತವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ರಜನೀಕಾಂತ್ ಚಂಡಮಾರುತವನ್ನೂ ತಮ್ಮ ರಾಜ ಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧಿಗಳು ಟೀಕಿಸಿದ್ದಾರೆ. ಪೊಟ್ಟಣಗಳ ಮೇಲೆ ಪಡಿ ಯಪ್ಪ, ಬಾಷಾ ಚಿತ್ರಗಳಲ್ಲಿನ ಫೋಟೋಗಳಿತ್ತು.
ಕೇರಳದಲ್ಲೂ ಹಾನಿ
ಕೊಚ್ಚಿ: ಗಜ ಚಂಡಮಾರುತದ ವೇಗ ಕಡಿಮೆಯಾಗಿದ್ದರೂ ಕೇರಳದ ಎರ್ನಾ ಕುಲಂ ಜಿಲ್ಲೆಯಲ್ಲಿ ಶನಿವಾರ ಸಂಜೆ ವ್ಯಾಪಕ ಹಾನಿ ಎಸಗಿದೆ. ಕನಿಷ್ಠ 200 ಮನೆಗಳು ಜಖಂ ಗೊಂಡಿದ್ದು, ಎರಡು ಮನೆಗಳು ಪೂರ್ತಿಯಾಗಿ ಕುಸಿದಿವೆ. ನೂರಾರು ಮರ ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದ ವಾಹನ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ಎ. 26ರಂದು ಕೇರಳದಲ್ಲಿ ರಜೆ
ಸಹೋದರನ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಯತ್ನ… CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
Liquor Policy Case: ದೆಹಲಿಯ ಮತ್ತೊಬ್ಬ ಸಚಿವನಿಗೆ ಜಾರಿ ನಿರ್ದೇಶನಾಲಯ ಸಮನ್ಸ್
Water Crisis; ಕರ್ನಾಟಕ ಸೇರಿ ದಕ್ಷಿಣ ಭಾರತದ ಜಲಾಶಯಗಳು ಖಾಲಿ.. ಖಾಲಿ!
Kejriwal Arrest Case; ಭಾರತ ಈ ದೇಶಗಳಿಂದ ಪಾಠ ಕಲಿಯಬೇಕಿಲ್ಲ…: ಜಗದೀಪ್ ಧನ್ಕರ್ ತಿರುಗೇಟು