ಗಜ ಚಂಡಮಾರುತ: ತಮಿಳುನಾಡಲ್ಲಿ ಕಟ್ಟೆಚ್ಚರ
Team Udayavani, Nov 15, 2018, 6:51 AM IST
ಚೆನ್ನೈ: ಬಂಗಾಲ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಗಜ ಚಂಡ ಮಾರುತವು ಗುರುವಾರ ಸಂಜೆ ಅಥವಾ ರಾತ್ರಿ ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಕಡಲೂರು ಮತ್ತು ಪಂಬನ್ ನಡುವೆ ಗಜ ಅಪ್ಪಳಿಸಲಿದೆ. ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಗಳೂ ನಡೆದಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರನ್ನು ಈಗಾಗಲೇ ವಾಪಸ್ ಕರೆಸಲಾಗಿದೆ. ಕರಾವಳಿ ತೀರದ 8 ಜಿಲ್ಲೆಗಳಿಗೆ ರಜೆ ಸಾರಲಾಗಿದೆ. ಸುಮಾರು 30,500 ರಕ್ಷಣಾ ಸಿಬಂದಿ ಸನ್ನದ್ಧರಾಗಿದ್ದಾರೆ. 24 ತಾಸುಗಳ ಅವಧಿಯಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ.