ಗಾಂಧಿ ಹತ್ಯೆ ಮರುತನಿಖೆ ಬೇಕಿಲ್ಲ
Team Udayavani, Jan 9, 2018, 6:00 AM IST
ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆ ಕುರಿತು ಮರುತನಿಖೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಸೋಮವಾರ ಅಮಿಕಸ್ ಕ್ಯೂರಿ ಅರಿಕೆ ಮಾಡಿದ್ದಾರೆ.
ಗಾಂಧಿ ಹತ್ಯೆ ಕುರಿತು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮರುತನಿಖೆಯ ಅಗತ್ಯಗಳ ಕುರಿತು ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಅಮಿಕಸ್ ಕ್ಯೂರಿ ಅಮರೇಂದ್ರ ಶರಣ್ ಅವರು ಸೋಮವಾರ ವರದಿ ಸಲ್ಲಿಸಿದ್ದು, ಮರುತನಿಖೆ ಬೇಕಾಗಿಲ್ಲ ಎಂದು ಹೇಳಿದ್ದಾರೆ.
“ಗಾಂಧಿ ಹತ್ಯೆಯ ಹಿಂದಿದ್ದ ಸಿದ್ಧಾಂತ, ವ್ಯಕ್ತಿ, ಅವರ ದೇಹ ವನ್ನು ಹೊಕ್ಕಿದ್ದ ಗುಂಡುಗಳು, ಬಳಸಿದ ಬಂದೂಕನ್ನು ಈಗಾಗಲೇ ಗುರುತು ಮಾಡಲಾಗಿದೆ. ಅರ್ಜಿದಾರರು ಹೇಳಿರುವಂಥ ನಾಲ್ಕನೇ ಗುಂಡು ನಿರಾಧಾರ’ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.
ಗಾಂಧೀಜಿ ಹತ್ಯೆಯಾಗಿದ್ದು, ನಾಥೂರಾಂ ಗೋಡ್ಸೆ ಹಾರಿಸಿದ ಗುಂಡಿನಿಂದಲ್ಲ. 4ನೇ ಗುಂಡನ್ನು ಬೇರ್ಯಾರೋ ಹಾರಿಸಿದ್ದರು. ಆ ಗುಂಡಿನಿಂದಲೇ ಗಾಂಧಿ ಹತರಾಗಿದ್ದರು. ಹೀಗಾಗಿ ನಾಥೂರಾಂ ಗೋಡ್ಸೆ ಗಾಂಧಿ ಹಂತಕನಲ್ಲ. ಈ ಕುರಿತು ಮರುತನಿಖೆ ಆಗಬೇಕು’ ಎಂದು ಅಭಿನವ ಭಾರತ ಸಂಸ್ಥಾಪಕ ಪಂಕಜ್ ಫಡ್ನಿಸ್ ಕಳೆದ ವರ್ಷ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮೊದಲು ಇವರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ