ವಾರಾಣಸಿಯಲ್ಲಿ ಗಂಗಾರತಿ ನೇರ ಪ್ರಸಾರಕ್ಕೆ ಎಲ್ಇಡಿ
Team Udayavani, Aug 19, 2019, 5:33 AM IST
ಹೊಸದಿಲ್ಲಿ: ವಾರಾಣಸಿಯ ದಶಾಶ್ವಮೇಧ ಘಾಟ್ನಲ್ಲಿ ನಡೆಯಲಿರುವ ಗಂಗಾರತಿಯನ್ನು ಇನ್ನು ಮುಂದೆ ಕಾಶಿಯ ಎಲ್ಲ ಘಾಟ್ನಲ್ಲೂ ವೀಕ್ಷಿಸಬಹುದು. ಇದಕ್ಕಾಗಿ ಎಲ್ಲ ಘಾಟ್ಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿದೆ.
ಗಂಗಾ ನದಿ ಮತ್ತು ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ನಲ್ಲೂ ದೊಡ್ಡ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗುತ್ತದೆ. ದಶಾಶ್ವಮೇಧ ಘಾಟ್ನಲ್ಲಿ ಸಂಜೆ 7 ಗಂಟೆಗೆ ಗಂಗಾರತಿ ನಡೆಯುತ್ತದೆ. ವಾರಾಣಸಿಗೆ ತೆರಳುವ ಭಕ್ತರು ದಶಾಶ್ವಮೇಧ ಘಾಟ್ಗೆ ಸಂಜೆ ತೆರಳಿ ಗಂಗಾರತಿಯನ್ನು ನೋಡಲು ಸಾಧ್ಯವಾಗದಿದ್ದರೆ, ಎಲ್ಇಡಿ ಸ್ಕ್ರೀನ್ಗಳ ಮೂಲಕ ವೀಕ್ಷಿಸಬಹುದು. ಇದು 11.5 ಕೋಟಿ ರೂ. ಯೋಜನೆಯಾಗಿದ್ದು, ಅನುಮತಿ ದೊರೆತ ತತ್ಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು