ರೇಯಾನ್ ಘಟಕದಲ್ಲಿ ಅನಿಲ ಸೋರಿಕೆ: ಓರ್ವ ಕಾರ್ಮಿಕ ಸಾವು
Team Udayavani, Feb 16, 2018, 3:07 PM IST
ಥಾಣೆ : ಥಾಣೆ ಜಿಲ್ಲೆಯ ಕಲ್ಯಾಣ್ ನ ಶಹಾದ್ ಎಂಬಲ್ಲಿ ರೇಯಾನ್ ಉತ್ಪಾದನಾ ಘಟಕವೊಂದರಲ್ಲಿ ಅಪಾಯಕಾರಿ ಅನಿಲ ಸೋರಿಕೆ ಉಂಟಾಗಿ 34 ವರ್ಷದ ಕಾರ್ಮಿಕನೊಬ್ಬ ಮೃತಪಟ್ಟು ಇತರ 11 ಮಂದಿ ಆಸ್ಪತ್ರೆಗೆ ಸೇರಿದ ಘಟನೆ ವರದಿಯಾಗಿದೆ.
ನಿನ್ನೆ ಗುರುವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಮೂರು ಪ್ರತ್ಯೇಕ ಅನಿಲಗಳನ್ನು ಮಿಶ್ರಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದಾಗ ರಾತ್ರಿ ಸುಮಾರು 11.30ಕ್ಕೆ ಅನಿಲ ಸೋರಿಕೆ ಉಂಟಾಗಿ ಕೆಲವು ಕಾರ್ಮಿಕರಿಗೆ ವಾಂತಿ,ಕಣ್ಣುರಿತ ಮತ್ತು ಉಸಿರುಗಟ್ಟಿದ ಅನುಭವವಾಯಿತು. ಒಡನಯೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಆರೆ ಸಂಜಯ್ ಶರ್ಮಾ ಎಂಬ ಕಾರ್ಮಿಕರೊಬ್ಬರು ವಿಷಾನಿಲ ಸàವನೆಯಿಂದ ಸಾವಪ್ಪಿರು. ಉಲ್ಲಾಸ್ನಗರ ಸಿಟಿ ಪೊಲೀಸ್ ಸ್ಟೇಶನ್ನವರು ಈ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.