ಚಂದಾ ಕೊಚರ್ಗೆ ಗೇಟ್ಪಾಸ್
Team Udayavani, Jan 31, 2019, 12:30 AM IST
ಹೊಸದಿಲ್ಲಿ: ಐಸಿಐಸಿಐ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಸಿಇಒ ಮತ್ತು ಎಂಡಿ) ಚಂದಾ ಕೊಚರ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ವಿಡಿಯೋಕಾನ್ ಗ್ರೂಪ್ಗೆ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ್ದಾರೆ ಎಂಬ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಯು, ಕೊಚರ್ ನಿಯಮಗಳನ್ನು ಉಲ್ಲಂ ಸಿರುವುದು ನಿಜ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಕೊಚರ್ ನೀತಿ ಸಂಹಿತೆ ಮತ್ತು ಆಂತರಿಕ ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ಬ್ಯಾಂಕ್ನ ಆಡಳಿತ ಮಂಡಳಿ ನಿರ್ಧರಿಸಿ ಅವರನ್ನು ವಜಾ ಮಾಡಿದೆ. ಈ ನಿರ್ಧಾರದಿಂದಾಗಿ 2009ರ ಮಾರ್ಚ್ನಿಂದ 2018 ಮಾರ್ಚ್ ವರೆಗೆ ಅವರಿಗೆ ನೀಡಲಾಗುವ ಬೋನಸ್, ವೇತನ ಹೆಚ್ಚಳ, ವೈದ್ಯಕೀಯ ಭತ್ಯೆ ಸೇರಿದಂತೆ ಎಲ್ಲಾ ನಗದು ಮತ್ತು ನಗದು ರಹಿತ ಸೌಲಭ್ಯಗಳನ್ನು ಹಿಂಪಡೆಯಲೂ ನಿರ್ಧರಿಸಲಾಗಿದೆ.
2018ರ ಮಾರ್ಚ್ನಲ್ಲಿ ಚಂದಾ ಕೊಚರ್ ವಿರುದ್ಧದ ಆರೋಪಗಳು ಬಹಿರಂಗವಾಗುತ್ತಲೇ ಅವರು ಸಿಇಒ ಮತ್ತು ಎಂಡಿ ಹುದ್ದೆಯನ್ನು ತಾತ್ಕಾಲಿಕವಾಗಿ ತ್ಯಜಿಸಿ, ರಜೆಯ ಮೇಲೆ ತೆರಳಿದ್ದರು. ಕೊಚರ್ ವಿರುದ್ಧದ ಕ್ರಮದಿಂದಾಗಿ ಬ್ಯಾಂಕ್ನ ಮೂರನೇ ತ್ತೈಮಾಸಿಕ ಅವಧಿಯ ಲಾಭ ಶೇ.3ರಷ್ಟು ಕುಸಿತ ಕಂಡಿದೆ. ಹೀಗಾಗಿ, 1,605 ಕೋಟಿ ರೂ.ಗಳಷ್ಟು ಲಾಭ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ ಈ ಅವಧಿಯಲ್ಲಿ ಬ್ಯಾಂಕ್ನ ಒಟ್ಟು ಆದಾಯ 20,163.25 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು 16,832.22 ಕೋಟಿ ರೂ. ಆಗಿತ್ತು.
ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆ ಈ ಕ್ರಮ
ವಜಾ ಮಾಡಿ ಆದೇಶ ಹೊರಡಿಸಿದ ಐಸಿಐಸಿಐ ಬ್ಯಾಂಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು