GDP ಬೈಬಲ್ ಅಥವಾ ಮಹಾಭಾರತ ಅಲ್ಲ, ಭವಿಷ್ಯದಲ್ಲಿ ಜಿಡಿಪಿ ಮುಖ್ಯವೂ ಅಲ್ಲ: ಬಿಜೆಪಿ ಸಂಸದ ದುಬೆ
ಜಿಡಿಪಿ ಕಲ್ಪನೆ ಆರಂಭವಾಗಿದ್ದು 1943ರಲ್ಲಿ. ಅದಕ್ಕು ಮೊದಲು ಜಿಡಿಪಿ ಇರಲಿಲ್ಲ
Team Udayavani, Dec 2, 2019, 6:32 PM IST
ನವದೆಹಲಿ:ದೇಶದ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುವ ಜಿಡಿಪಿ(ಒಟ್ಟು ದೇಶೀಯ ಉತ್ಪಾದನೆ) ದರ ತೀವ್ರ ಇಳಿಕೆಯಾದ ಬೆನ್ನಲ್ಲೇ ಭವಿಷ್ಯದಲ್ಲಿ ಜಿಡಿಪಿಯನ್ನು ನಿಲ್ಲಿಸುವುದೇ ಸಮರ್ಪಕವಾಗಲಿದೆ. ಜಿಡಿಪಿಗಿಂತ ಮುಖ್ಯವಾದದ್ದು ಜನರು ಹೆಚ್ಚು ಸಂತೋಷವಾಗಿದ್ದಾರೆಯೇ ಎಂಬುದು ಗಮನಾರ್ಹವಾದುದು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೋಮವಾರ ಲೋಕಸಭೆಯಲ್ಲಿ ಮತಾನಾಡುತ್ತ ತಿಳಿಸಿದ್ದಾರೆ.
ಜಿಡಿಪಿ ಕಲ್ಪನೆ ಆರಂಭವಾಗಿದ್ದು 1943ರಲ್ಲಿ. ಅದಕ್ಕು ಮೊದಲು ಜಿಡಿಪಿ ಇರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಜಿಡಿಪಿಯನ್ನೇ ಬೈಬಲ್, ರಾಮಾಯಣ ಅಥವಾ ಮಹಾಭಾರತದ ರೀತಿ ಪರಿಗಣಿಸುವುದರಲ್ಲಿ ಯಾವುದೇ ಉಪಯೋಗವಿಲ್ಲ. ಇನ್ಮುಂದೆ ಭವಿಷ್ಯದಲ್ಲಿ ಜಿಡಿಪಿಯನ್ನು ಆರ್ಥಿಕ ಸೂಚ್ಯಂಕ ಎಂಬಂತೆ ಬಿಂಬಿಸುವುದು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ ಎಂದು ದುಬೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸಮಾಜದ ಏಳಿಗೆಗೆ ನೆರವಾಗಬಲ್ಲ ಆರ್ಥಿಕತೆ ಮುಂದುವರಿಯುತ್ತಿರುವಾಗ ಅದರ ಲಾಭ ಜನಸಾಮಾನ್ಯರಿಗೆ ದೊರೆಯಬೇಕು. ಅಭವೃದ್ಧಿಯ ಏಳಿಗೆ ಹೀಗೆ ಜಿಡಿಪಿಗಿಂತ ಸಂತೋಷವೇ ಹೆಚ್ಚು ಮುಖ್ಯವಾಗಲಿದೆ ಎಂದು ದುಬೆ ತಮ್ಮದೇ ಹೊಸ ಸಿದ್ದಾಂತದ ಮೂಲಕ ವಿವರಣೆ ನೀಡಿರುವುದಾಗಿ ವರದಿ ವಿವರಿಸಿದೆ.
ಕಳೆದ ಗುರುವಾರ ಬಿಡುಗಡೆಗೊಂಡ 2ನೇ ತ್ರೈಮಾಸಿಕ ಜಿಡಿಪಿ ದರ ಶೇ.4.5ಕ್ಕೆ ಕುಸಿದಿತ್ತು. ಇದು ಕಳೆದ ಆರು ವರ್ಷಗಳಿಗಿಂತ ಕಡಿಮೆ ಪ್ರಮಾಣದ ಜಿಡಿಪಿ ಕುಸಿತವಾಗಿದ್ದು, ಈ ಬಗ್ಗೆ ಆರ್ಥಿಕ ತಜ್ಞರು ದೇಶದ ಆರ್ಥಿಕ ಅಭಿವೃದ್ಧಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
MUST WATCH
ಹೊಸ ಸೇರ್ಪಡೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ