ರಾಜಸ್ಥಾನ ವಿಧಾನಸೌಧದಲ್ಲಿ ಭೂತ! ಇಬ್ಬರು ಶಾಸಕರ ಸಾವು
Team Udayavani, Feb 24, 2018, 3:31 PM IST
ಜೈಪುರ: ರಾಜಸ್ಥಾನ ವಿಧಾನಸೌಧದಲ್ಲಿ ಭೂತ ಇದೆಯಂತೆ. ಇದಕ್ಕಾಗಿ ವಿಧಾನಸೌಧದಲ್ಲಿ ಶುದ್ಧೀಕರಣ ನಡೆಸಬೇಕು. ಭೂತದಿಂದಾಗಿಯೇ ಕಳೆದ ಆರು ತಿಂಗಳಲ್ಲಿ ಇಬ್ಬರು ಶಾಸಕರು ಸಾವನ್ನಪ್ಪಿದ್ದಾರೆ…. ಮಧ್ಯಾಹ್ನ 12 ಗಂಟೆಯೊಳಗೆ ಅಧಿವೇಶನ ಮುಗಿಸಬೇಕು! ಹೀಗೆಲ್ಲ ಚರ್ಚೆಯಾಗಿದ್ದು ಯಾವುದೋ ಗಲ್ಲಿಕಟ್ಟೆಯಲ್ಲಲ್ಲ. ಬದಲಿಗೆ ರಾಜಸ್ಥಾನದ ವಿಧಾನಸಭೆಯಲ್ಲಿ! ಸುಮಾರು ಅರ್ಧಗಂಟೆಯ ಕಾಲ ಈ ಬಗ್ಗೆ ಕಲಾಪದಲ್ಲಿ ಶುಕ್ರವಾರ ಚರ್ಚೆ ನಡೆದಿದೆ.
ವಿಧಾನಸೌಧದ ಕಾಂಪೌಂಡಿನ ಪಕ್ಕವೇ ಸ್ಮಶಾನವಿದೆ. ಅಷ್ಟೇ ಅಲ್ಲ, ವಿಧಾನಸೌಧ ನಿರ್ಮಾಣವಾದ ಕೆಲವು ಭಾಗವೂ ಮೊದಲು ಸ್ಮಶಾನವಾಗಿತ್ತು. ಹೀಗಾಗಿ ಭೂತ ಸೇರಿಕೊಂಡಿರಬಹುದು ಎಂದು ಶಾಸಕ ರೆಹಮಾನ್ ಹೇಳಿದ್ದಾರೆ. ಈ ಬಗ್ಗೆ ಹಲವು ಶಾಸಕರು ದನಿಗೂಡಿಸಿದ್ದಾರೆ.