ಬಕ್ತಿಯಾರ್ಪುರ, ಅಕ್ಬರ್ಪುರ: ಪುನರ್ ನಾಮಕರಣಕ್ಕೆ ಸಲಹೆ, ವಿರೋಧ
Team Udayavani, Oct 22, 2018, 4:26 PM IST
ಪಟ್ನಾ : ಒಂಬತ್ತನೇ ಶತಮಾನದ ಅಫ್ಘಾನ್ ಮಿಲಿಟರಿ ಜನರಲ್ ಬಕ್ತಿಯಾರ್ ಖೀಲ್ಜಿ ಹೆಸರನ್ನು ಹೊಂದಿರುವ ಮತ್ತು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹುಟ್ಟಿ ಬೆಳೆದ ಊರಾಗಿರುವ, ಪಟ್ನಾ ಹೊರವಲಯದ ಬಕ್ತಿಯಾರ್ಪುರದ ಹೆಸರನ್ನು ಬದಲಾಯಿಸಬೇಕೆಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮಾಡಿರುವ ಸಲಹೆ ಸ್ವತಃ ಬಿಜೆಪಿ ಮತ್ತು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.
ದಿಲ್ಲಿಯ ಅಂದಿನ ಸುಲ್ತಾನ ಕುತುಬುದ್ದೀನ್ ಐಬಕ್ ನ ಆದೇಶದ ಪ್ರಕಾರ ಅಫ್ಘಾನ್ ಮಿಲಿಟರಿ ಜನರಲ್ ಬಕ್ತಿಯಾರ್ ಖೀಲ್ಜಿ ಬಿಹಾರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡಿದ್ದ. ಪಟ್ನಾ ಹೊರವಲಯದಲ್ಲಿರುವ ನಗರಕ್ಕೆ ಬಕ್ತಿಯಾರ್ ಹೆಸರು ಬಂದಿರುವುದು ಆತನಿಂದಾಗಿ ಎಂಬುದನ್ನು ಇತಿಹಾಸ ತಿಳಿಸುತ್ತದೆ.
ಗಿರಿರಾಜ್ ಸಿಂಗ್ ಅವರ ಈ ಪ್ರಸ್ತಾವವನ್ನು ಬಿಹಾರದಲ್ಲಿನ ಜೆಡಿಯು (ಸಿಎಂ ನಿತೀಶ್ ಕುಮಾರ್ ಪಕ್ಷ), ವಿರೋಧ ಪಕ್ಷಗಳಾಗಿರುವ ಆರ್ಜೆಡಿ ಮತ್ತು ಹಿಂದುಸ್ಥಾನಿ ಆವಾಮ್ ಮೋರ್ಚಾ ತೀವ್ರವಾಗಿ ಆಕ್ಷೇಪಿಸಿವೆ.
ಗಿರಿರಾಜ್ ಸಿಂಗ್ ಅವರು ತಾವು ಪ್ರತಿನಿಧಿಸುತ್ತಿರುವ ಅಕ್ಬರ್ಪುರ ಲೋಕಸಭಾ ಕ್ಷೇತ್ರಕ್ಕೂ ಬೇರೆ ಹೆಸರಿಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರು ಈ ಎರಡೂ ಸ್ಥಳಗಳಿಗೆ ಯಾವುದೇ ಪರ್ಯಾಯ ನಾಮವನ್ನು ಸೂಚಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ