ಆಮ್ ಆದ್ಮಿ ಪಕ್ಷ ಗೆದ್ದರೆ, ಶೇ 80 ರಷ್ಟು ಗೋವಾದ ಯುವಕರಿಗೆ ಉದ್ಯೋಗ: ರಾಹುಲ್ ಮಾಂಮ್ರೆ
Team Udayavani, Oct 4, 2021, 3:50 PM IST
ಪಣಜಿ: ಆಮ್ ಆದ್ಮಿ ಪಕ್ಷವು ಗೋವಾದ ಪ್ರತಿಯೊಂದು ಬೂಥ್ನಲ್ಲಿಯೂ ಕೇಜ್ರಿವಾಲ್ ರವರ ಎಂಪ್ಲೊಯ್ಮೆಂಟ್ ಗ್ಯಾರಂಟಿ ತಲುಪಿಸಲು ಸಜ್ಜಾಗಿದೆ ಎಂದು ಗೋವಾ ಆಮ್ ಆದ್ಮಿ ಪಕ್ಷದ ಪ್ರಮುಖ ರಾಹುಲ್ ಮಾಂಮ್ರೆ ನುಡಿದರು.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಗೋವಾದಲ್ಲಿ ಸರ್ಕಾರಿ ನೌಕರಿಯಲ್ಲಿ ಪಾರದರ್ಶಕತೆಯನ್ನು ತಂದು ಜನಸಾಮಾನ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಲಾಗುವುದು ಎಂದು ಅವರು ವಚನ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಪ್ರತಿ ಕುಟುಂಬದಲ್ಲಿ ನಿರುದ್ಯೋಗಿಗಳಿಗೆ ನೌಕರಿ ಲಭಿಸುವವರೆಗೂ ಪ್ರತಿ ತಿಂಗಳು 3000 ರೂ ನೌಕರಿ ಭತ್ತೆ ನೀಡಲಾಗುವುದು. ಖಾಸಗಿ ಕ್ಷೇತ್ರದಲ್ಲಿ ಶೇ 80 ರಷ್ಟು ಗೋವಾದ ಯುವಕರಿಗಾಗಿ ಉದ್ಯೋಗ ಮೀಸಲಿಡಲಾಗುವುದು. ಗಣಿಗಾಗಿಕೆ ಬಂದ್ ಆಗಿರುವುದರಿಂದ ಗಣಿ ಉದ್ಯೋಗ ಅವಲಂಭಿತರಿಗೆ 5000 ರೂ ನೀಡುವುದಾಗಿ ಆಮ್ ಆದ್ಮಿ ಘೋಷಿಸಿದೆ ಎಂದು ರಾಹುಲ್ ಮಾಂಮ್ರೆ ನುಡಿದರು.
ಆಮ್ ಆದ್ಮಿ ಪಕ್ಷಕ್ಕೆ ಗೋವಾದ ಜನತೆ ಪ್ರೀತಿ ನೀಡಿದ್ದಾರೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ರವರು ಇಷ್ಟೊಂದು ಅಭಿವೃದ್ಧಿ ಪಡಿಸಲು ಹೇಗೆ ಸಾಧ್ಯವಾಯಿತು ಎಂಬುದು ಜನರಿಗೆ ಕೌತುಕವಿದೆ ಎಂದು ರಾಹುಲ್ ಮಾಂಮ್ರೆ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ