ಅಪ್ಪನ ಸ್ಪರ್ಧೆಗೆ ಅಡ್ಡಿಯಾದ ಮಗ : ದಿನೇಶ್ ಗುಂಡೂರಾವ್ ಆರೋಪ
Team Udayavani, Jan 29, 2022, 5:27 PM IST
ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪರ್ಯೆ ಕ್ಷೇತ್ರದ ಚುನಾವಣಾ ಕಣದಿಂದ ಮಾಜಿ ಮುಖ್ಯಮಂತ್ರಿ, 83 ವರ್ಷದ ಪ್ರತಾಪಸಿಂಹ ರಾಣೆ ಹಿಂದೆ ಸರಿದಿದ್ದು, ಸಚಿವ ವಿಶ್ವಜಿತ್ ರಾಣೆ ತಂದೆಯ ರಾಜಕಾರಣಕ್ಕೆ ಅಡ್ಡಿಯಾಗಿದ್ದಾರೆ ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪರ್ಯೆ ಕ್ಷೇತ್ರದಿಂದ ಪ್ರತಾಪಸಿಂಹ ರಾಣೆ ಸ್ಫರ್ಧಿಸಲಿದ್ದಾರೆ ಎಂದು ಅವರಿಗೆ ಕಾಂಗ್ರೇಸ್ ಟಿಕೆಟ್ ನೀಡಿತ್ತು. ರಾಣೆಯವರು ಇಂದೂ ಕೂಡ ಚುನಾವಣೆ ಸ್ಫರ್ಧೆಗೆ ಉತ್ಸುಕರಾಗಿದ್ದಾರೆ. ಪ್ರತಾಪಸಿಂಹ ರಾಣೆ ಚುನಾವಣೆಗೆ ಸ್ಫರ್ಧಿಸದಂತೆ ಕುಟುಂಬದವರು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
ಬಹುಶಃ ಪ್ರತಾಪಸಿಹ ರಾಣೆಯವರು ಜೀವನದ ಈ ಹಂತದಲ್ಲಿ ತನ್ನ ಮಗನನ್ನು ಎದುರಿಸಲು ಬಯಸಲಿಲ್ಲ. ಮಗ ಅವರನ್ನು ಪಕ್ಕಕ್ಕೆ ತಳ್ಳಿರಬಹುದು. ಇದು ಅತ್ಯಂತ ದುರದೃಷ್ಠಕರ ಸಂಗತಿ. ಮಗ ತನ್ನ ತಂದೆಯನ್ನು ಗೌರವಿಸಬೇಕಿತ್ತು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಪರ್ಯೆ ಕ್ಷೇತ್ರದಿಂದ ಮಾವನ ವಿರುದ್ಧ ಸೊಸೆ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಈ ಕ್ಷೇತ್ರ ಭಾರಿ ಚರ್ಚೆಗೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಣೆ ಯವರ ಸೊಸೆ ಡಾ. ದಿವ್ಯಾ ರಾಣೆ ಸ್ಫರ್ಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ